Kornersite

Bengaluru Entertainment Gossip Mix Masala Politics Sandalwood

ರಾಜಕೀಯಕ್ಕೆ ಎಂಟ್ರಿ ಕೊಡ್ತಾರಾ ಯಶ್..? ಈ ಬಗ್ಗೆ ಏನ್ ಹೇಳ್ತಾರೆ ರಾಕಿ ಬಾಯ್!

ರಾಜ್ಯದಲ್ಲಿ ವಿಧಾನಸಭಾ-2023ರ ಕಾವು ಜೋರಾಗಿದೆ. ಕರ್ನಾಟಕದಲ್ಲಿ ಒಂದೇ ಹಂತದಲ್ಲಿ ಮೇ 10 ರಂದು ಮತದಾನ ನಡೆಯಲಿದೆ. ಹೀಗಿರುವಾಗ ಮತದಾರರ ಗಮನ ತಮ್ಮತ್ತ ಸೆಳೆಯಲು ರಾಜಕಾರಣಿಗಳು ಹಾಗೂ ರಾಜಕೀಯ ಸ್ಟಾರ್ ನಟರನ್ನ ಕರೆತರುವಲ್ಲಿ ಪ್ರಯತ್ನ ನಡೆಸಿವೆ.

ಈಗಾಗಲೇ ಬಿಜೆಪಿ ಮುಖಂಡರು ಕಿಚ್ಚ ಸುದೀಪ್ ಅವರನ್ನ ಕರೆತರುವಲ್ಲಿ ಯಶಸ್ವಿಯಾಗಿದ್ದಾರೆ. ಬಿಜೆಪಿ ಪರ ಬ್ಯಾಟ್ ಬೀಸೋದಾಗಿ ಕಿಚ್ಚ ಕೂಡ ಬಹಿರಂಗವಾಗಿ ಅನೌನ್ಸ್ ಮಾಡಿದ್ದಾರೆ. ಸುದೀಪ್ ಬೆನ್ನಲ್ಲೇ ಈ ಸಾಲಿನಲ್ಲಿ ಯಶ್ ಕೂಡ ಸೇರುತ್ತಾರಾ ಅನ್ನೋ ಮಾತು ಹರದಾಡುತ್ತಿದೆ.

ಬಟ್ ಇದೀಗ ಈ ಊಹಾಪೋಹಕ್ಕೆ ಆಲ್ ಮೋಸ್ಟ್ ತೆರೆ ಬಿದ್ದಿದೆ. ಹೌದು, ಯಶ್ ರಾಜಕೀಯಕ್ಕೆ ಪ್ರವೇಶ ಮಾಡುವುದಿಲ್ಲ ಎಲ್ಲ ಎಂದು ಕಡ್ಡಿ ಮುರಿದಂತೆ ಹೇಳಿ ಬಿಟ್ಟಿದ್ದಾರೆ.

ಈಗಾಗಲೇ ಹಲವು ಪಕ್ಷದವರು ಯಶ್ ಮನೆ ಬಾಗಿಲನ್ನ ತಟ್ಟಿದ್ದಾರೆ. ತಮ್ಮ ಪರ ಹಾಗೂ ತಮ್ಮ ಪಕ್ಷದ ಪರ ಬ್ಯಾಟ್ ಬೀಸುವಂತೆ ಕೇಳಿಕೊಂಡಿದ್ದಾರೆ.

ಆದ್ರೆ ಯಶ್ ಮಾತ್ರ ನಾನು ಈ ಬಾರಿ ರಾಜಕೀಯಕ್ಕೆ ಎಂಟ್ರಿ ಕೊಡುವುದಿಲ್ಲ ಎಂದು ಹೇಳಿದ್ದಾರೆ. ಯಾವ ಪಕ್ಷದ ಪರ ಪ್ರಾಚಾರ ಮಾಡುವುದಿಲ್ಲ ಎಂದು ಉತ್ತರ ಕೊಟ್ಟಿದ್ದಾರಂತೆ.

You may also like

Politics

ಕಾಂಗ್ರೆಸ್ ಮೊದಲ ಪಟ್ಟಿ ಬಿಡುಗಡೆ ಬಗ್ಗೆ ಎಂ.ಬಿ. ಪಾಟೀಲ್ ಹೇಳಿದ್ದೇನು? ಯಾವಾಗ ಬಿಡುಗಡೆಯಾಗಲಿದೆ ಪಟ್ಟಿ?

ವಿಜಯಪುರ : ರಾಜ್ಯದಲ್ಲಿ ಚುನಾವಣಾ ಕಾವು ಜೋರಾಗಿದೆ. ಈ ಹಿನ್ನೆಲೆಯಲ್ಲಿ ಎಲ್ಲ ಪಕ್ಷಗಳು ಭರ್ಜರಿ ತಯಾರಿ ನಡೆಸಿದ್ದು, ಅಭ್ಯರ್ಥಿಗಳ ಪಟ್ಟಿ ಅಂತಿಮಗೊಳಿಸುತ್ತಿವೆ. ಈಗಾಗಲೇ ಕಾಂಗ್ರೆಸ್ ನ ಮೊದಲ
Politics

ಇಬ್ಬರು ಮಕ್ಕಳನ್ನು ದತ್ತು ಪಡೆದ ಜನಾರ್ದನ ರೆಡ್ಡಿ

ಕೊಪ್ಪಳ : ತಂದೆ- ತಾಯಿ ಇಲ್ಲದ ಇಬ್ಬರು ಮಕ್ಕಳನ್ನು ಕೆಆರ್ ಪಿಪಿ ಸಂಸ್ಥಾಪಕ ಜನಾರ್ದನ ರೆಡ್ಡಿ ದತ್ತು ಪಡೆದಿದ್ದಾರೆ.ಜಿಲ್ಲೆಯ ಗಂಗಾವತಿ ತಾಲೂಕಿನ ವೀರಾಪುರ ತಾಂಡಾದಲ್ಲಿ ಇಬ್ಬರು ಮಕ್ಕಳನ್ನು