Mumbai: ತಂದೆಯೇ ತನ್ನ ಎರಡು ವರ್ಷದ ಕಂದಮ್ಮನನ್ನು ಕೊಲೆ ಮಾಡಿ, ನದಿಗೆ ಎಸೆದಿರುವ ಅಮಾನವೀಯ ಘಟನೆ ಮುಂಬಯಿನಲ್ಲಿ ಬೆಳಕಿಗೆ ಬಂದಿದೆ.

22 ವರ್ಷದ ವ್ಯಕ್ತಿಯು ವಿವಾಹೇತರ ಸಂಬಂಧ ಹೊಂದಿದ್ದ. ಆಗ ಅವಳನ್ನು ಮದುವೆಯಾಗಲು ಮಗು ಅಡ್ಡಿ ಬರಬಾರದು ಎಂಬ ಕಾರಣಕ್ಕೆ ಹತ್ಯೆ ಮಾಡಿದ್ದಾನೆ ಎನ್ನಲಾಗಿದೆ. ಶಾಹು ನಗರ ಪೊಲೀಸ್ ಠಾಣೆಯ ಅಧಿಕಾರಿಗಳು ಬುಧವಾರ ಮುಂಜಾನೆ ಕೇಮ್ಕಾರ್ ಚೌಕ್ ಬಳಿಯ ಮಾಹಿಮ್-ಸಿಯಾನ್ ಕ್ರೀಕ್ ಲಿಂಕ್ ರಸ್ತೆಯಲ್ಲಿ ಮಗುವಿನ ಶವ ಪತ್ತೆಯಾಗಿತ್ತು. ಪ್ಲಾಸ್ಟಿಕ್ ಚೀಲದಲ್ಲಿ ಶವವಿದ್ದು, ಮಗುವಿನ ತಲೆ ಮತ್ತು ಬಲ ಮಣಿಕಟ್ಟಿನಲ್ಲಿ ಗಾಯದ ಗುರುತುಗಳಿದ್ದವು. ಮಗುವಿನ ಕುರಿತು ಪತ್ತೆ ಹಚ್ಚುವುದು ಪೊಲೀಸರಿಗೆ ಕಷ್ಟವಾಗಿತ್ತು. ಆದರೆ ಮಗುವನ್ನು ಹುಡುಕುತ್ತಿದ್ದ ಸಂಬಂಧಿಕರು ಪೊಲೀಸ್ ಠಾಣೆಗೆ ಬಂದು ದೂರು ನೀಡಿದ್ದರು, ಬಳಿಕ ಶವವನ್ನು ಅವರಿಗೆ ತೋರಿಸಿದಾಗ ಗುರುತು ಹಿಡಿದಿದ್ದಾರೆ.

ತನಿಖೆ ಆರಂಭಿಸಿದ ಪೊಲೀಸರು, ಬಾಲಕನ ಸಂಬಂಧಿಕರೊಂದಿಗೆ ವಿಚಾರಣೆ ನಡೆಸಿದಾಗ, ಆತನ ತಂದೆ ಧಾರಾವಿ ಕೊಳೆಗೇರಿಯಲ್ಲಿ ನೆಲೆಸಿದ್ದಾನೆ ಎಂಬ ಮಾಹಿತಿ ಪಡೆದು, ಆತನನ್ನು ಬಂಧಿಸಿದ್ದಾರೆ. ಗಾರ್ಮೆಂಟ್ಸ್ ಫ್ಯಾಕ್ಟರಿಯಲ್ಲಿ ಟೈಲರ್ ಆಗಿ ಕೆಲಸ ಮಾಡುತ್ತಿದ್ದ ಆರೋಪಿ, ಮಹಿಳೆಯೊಂದಿಗೆ ವಿವಾಹೇತರ ಸಂಬಂಧ ಹೊಂದಿದ್ದ. ಆಕೆ ತನ್ನನ್ನು ಮದುವೆಯಾಗಲು ಬಯಸಿದರೆ ತನ್ನ ಹೆಂಡತಿ ಮತ್ತು ಮಗನನ್ನು ಬಿಟ್ಟು ಬಾ ಎಂದು ಷರತ್ತು ಹಾಕಿದ್ದಳು. ಹೀಗಾಗಿ ಆರೋಪಿಗಳು ಅವರನ್ನು ಕೊಲ್ಲಲು ಯೋಜನೆ ರೂಪಿಸಿದ್ದರು. ಚಾಕೊಲೇಟ್ ಕೊಡಿಸುವುದಾಗಿ ಹೇಳಿ ಆಸೆ ತೋರಿಸಿ ಮಗುವನ್ನು ಕರೆದುಕೊಂಡು ಹೋಗಿ ಹತ್ಯೆ ಮಾಡಿ, ನದಿಗೆ ಎಸೆದಿದ್ದಾನೆ ಎನ್ನಲಾಗಿದೆ.