ಸ್ನೇಹಿತ ಮಾತನಾಡಿದ್ದಾರೆ. ನೆಲಮಂಗಲದ ಅರಿಶಿಣಕುಂಟೆ ಸಮೀಪದ ನಿವಾಸದಲ್ಲಿ ನೇಣಿಗೆ ಶರಣಾಗಿದ್ದರು. ಸಾವಿನ ನಂತರ ಸಾಮಾಜಿಕ ಜಾಲತಾಣದಲ್ಲಿ ಹಲವು ಊಹಾಪೋಹಗಳು ಹರಿದಾಡುತ್ತಿವೆ. ಇದಕ್ಕೆಲ್ಲ ಸ್ನೇಹಿತ ತೆರೆ ಎಳೆದಿದ್ದಾರೆ. ಇನ್ನು ಇದೇ ವಿಚಾರಕ್ಕೆ ಸಂಪತ್ ಜಯರಾಮ್ ಸ್ನೇಹಿತ ರಾಜೇಶ್ ಧ್ರುವ ತಮ್ಮ ಇನ್ ಸ್ಟಾಗ್ರಾಮ್ ಖಾತೆಯಲ್ಲಿ ವಿಡಿಯೋವೊಂದನ್ನ ಶೇರ್ ಮಾಡಿದ್ದಾರೆ.
ಸ್ನೇಹಿತ ರಾಜೇಶ್ ಧ್ರುವ ಹೇಳಿದ್ದೇನು..?
ಸಂಪತ್ ನನಗೆ ಒಬ್ಬ ಒಳ್ಳೆಯ ಸ್ನೇಹಿತ. ಅಗ್ನಿ ಸಾಕ್ಷಿ ಸಿರೀಯಲ್ ನಿಂದ ಸಿಕ್ಕಾಪಟ್ಟೆ ಕ್ಲೋಸ್ ಆಗಿದ್ದ.
ನಟನೆಯಲ್ಲಿ ಒಳ್ಳೆಯ ಹೆಸರು ಪಡೆದುಕೊಂಡಿದ್ದ. ೨೦೧೩ ರಿಂದ ಅಗ್ನಿಸಾಕ್ಷಿಯಿಂದ ಜೊತೆ ಜೊತೆಗೆ ಕೆಲಸ ಮಾಡಿದ್ದೇವೆ. ಎಂಥಹ ಸಿಚ್ಯೂವೆಶನ್ ನಲ್ಲೂ ಆಕ್ಟ್ ಮಾಡುವಂತಹ ಅಪರೂಪದ ನಟ ಸಪತ್.
ಇಂಡಸ್ಟ್ರಿಯಲ್ಲಿ ತುಂಬ ಟ್ಯಾಲೆಂಟ್ ಇದ್ರನೂ ಕಷ್ಟನೇ..ಅಲ್ಪ ಟ್ಯಾಲೆಂಟ್ ಇದ್ರುನೂ ಕಷ್ಟನೇ..ಆತನ ಸಾವು ತುಂಬಾನೇ ಶಾಕ್ ಆಗುತ್ತಿದೆ. ಸಂಪತ್ ಸಾವಿನ ಬಗ್ಗೆ ಹಲವು ಊಹಾಪೋಹಗಳು ಹರದಾಡುತ್ತಿದೆ.
ನಿಮ್ಮ ನಿಮ್ಮ ವೀವ್ ಪಾಯಿಂಟ್ ಇಟ್ತುಕೊಂಡು, ಈಗ ಅವನು ಇಲ್ಲ ಎನ್ನುವ ವಿಚಾರ ಇಟ್ಟುಕೊಂಡು ಮಾತನಾಡಬೇಡಿ. ಅವನಿಗೇ ಆದಂತಹ ಫ್ಯಾಮಿಲಿ ಇದೆ. ಅವನಿಗೂ ನನ್ನ ತರ ಫ್ರೆಂಡ್ಸ್ ಇದ್ದಾರೆ.
ಸ್ವತಹ ನಾನು ಭಾರವಾದ ಮನಸ್ಸಿನಿಂದ ಮನವಿ ಮಾಡಿಕೊಳ್ಳುತ್ತಿದ್ದೇನೆ. ದಯವಿಟ್ಟು ಊಹಾಪೋಹ ಎಲ್ಲ ಬೇಡ.
ರಿಸೆಂಟ್ ಆಗಿ ಮದುವೆಯಾಗಿದ್ದ. ಆತನ ಪ್ರಿವೆಡ್ದಿಂಗ್ ಶೂಟ್ ಗೆ ಹೋಗಿದ್ದೆ. ಆತನ ಪತ್ನಿ ಇದೀಗ ೫ ತಿಂಗಳ ಗರ್ಭಿಣಿ. 12 ವರ್ಷ ಪ್ರೀತಿಸಿ ಮದುವೆಯಾಗಿದ್ದರು. ಅನ್ಯೋನ್ಯವಾಗಿಯೇ ಇದ್ದರು. ದಾಂಪತ್ಯದಲ್ಲಿ ಬಿರುಕು ಇರಲಿಲ್ಲ. ಸಂಪತ್ ವೀಕ್ ಮೈಂಡ್ ಹುಡುಗ ಅಲ್ಲ. ಆಕ್ಟಿಂಗ್ ಚಾನ್ಸ್ ಇರಲಿಲ್ಲ ಅದಕ್ಕಾಗಿಯೇ ಸೂಸೈಡ್ ಮಾಡಿಕೊಂಡ ಅಂತೆಲ್ಲ ಹೇಳ್ತಾ ಇದ್ದಾರೆ. ಅದೆಲ್ಲ ಶುಧ್ಧ ಸುಳ್ಳು.
ಚಾನ್ಸ್ ಗಳು ಇರಲಿಲ್ಲ ಆದರೆ ಬಾಲಾಜಿ ಫೋಟೋ ಸ್ಟುಡಿಯೋ ಮೂವಿ ಆತನಿಗೆ ಬ್ರೇಕ್ ಕೊಟ್ಟಿತ್ತು.
ತುಂಬಾ ಬ್ರಾಡ್ ಮೈಂಡೆಡ್ ಹುಡುಗ ಅವನು. ಏನೋ ಹುಡುಗಾಟ ಮಾಡಿಕೊಳ್ಳಲು ಹೋಗಿ ಹೀಗೆ ಆಗಿದೆ. ಹೆದರಿಸೋದಕ್ಕೆ ಹೋಗಿದ್ದು ಅಷ್ಟೇ ಬಟ್ ಕುತ್ತಿಗೆಗೆ ಲಾಕ್ ಆಗಿ ಬಿಟ್ತಿದೆ. ಗಂಡ ಹೆಂಡತಿ ಮಧ್ಯೆ ಚಿಕ್ಕ ಪುಟ್ಟ ಗಲಾಟೆ ಆಗಿದೆ. ಪತ್ನಿಗೆ ಹೆದರಿಸಲು ಹೋಗಿ ಅನಿರೀಕ್ಷಿತವಾಗಿ ಘಟನೆ ನಡೆದಿದೆ ಎನ್ನುವ ಸತ್ಯವನ್ನು ಸಂಪತ್ ಸ್ನೇಹಿತ ರಾಜೇಶ್ ಬಿಚ್ಚಿಟ್ತಿದ್ದಾರೆ. ಈ ವಿಡಿಯೋ ಮೂಲಕ ಎಲ್ಲ ವದಂತಿಗಳಿಗೆ ಬ್ರೇಕ್ ಹಾಕುವ ಪ್ರಯತ್ನ ಮಾಡಿದ್ದಾರೆ.
