ಮಹಿಳೆಯೊಬ್ಬಳು ಯುವಕನನ್ನು ಹತ್ಯೆ ಮಾಡಿರುವ ಘಟನೆ ಬೆಳಗಾವಿ ಜಿಲ್ಲೆಯಲ್ಲಿ ನಡೆದಿದೆ.
ತಾಲೂಕಿನ ತಾರಿಹಾಳ ಗ್ರಾಮದ ನಿವಾಸಿ ನಾಗರಾಜ್ ರಾಗಿ ಪಾಟೀಲ್(25) ಕೊಲೆಯಾದ ದುರ್ದೈವಿ. ತನ್ನ ಊರಿನಲ್ಲಿ ಜಾತ್ರೆಯಿದ್ದ ಹಿನ್ನೆಲೆಯಲ್ಲಿ ಹೊಸ ಬಟ್ಟೆ ಖರೀದಿಗಾಗಿ ಸ್ನೇಹಿತನ ಜೊತೆ ಬೆಳಗಾವಿ ನಗರಕ್ಕೆ ಆಗಮಿಸಿದ್ದ. ಈ ಸಂದರ್ಭದಲ್ಲಿ ಮದ್ಯ ವ್ಯಸನಿ ಮಹಿಳೆಯೋರ್ವಳು ತೆರಳಿದ್ದಾಳೆ. ಬೆಳಗಾವಿಯ ಕಂಗ್ರಾಳಿ ಕೆ.ಹೆಚ್. ಗ್ರಾಮದ ನಿವಾಸಿಯಾಗಿರುವ ಅಂದಾಜು 40 ವರ್ಷದ ಜಯಶ್ರೀ ಪವಾರ್ ಎಂಬುವವರು ನಾಗರಾಜ್ ಬಳಿ ಬಂದು ಮೊಬೈಲ್ ನೀಡು ಎಂದು ಕೇಳಿದ್ದಾಳೆ.
ಏಕಾಏಕಿ ಬಂದಿದ್ದಕ್ಕೆ ಗಾಬರಿಯಾದ ನಾಗರಾಜ್, ಏಕೆ ಎಂದು ಪ್ರಶ್ನೆ ಮಾಡಿದ್ದಾನೆ. ಆಗ ಕೈಯಲ್ಲಿದ್ದ ಚಾಕುವಿನಿಂದ ನಾಗರಾಜ್ನ ಎದೆಗೆ ಚುಚ್ಚಿದ್ದಾಳೆ. ಈ ಸಂದರ್ಭದಲ್ಲಿ ರಕ್ತದ ಮಡುವಿನಲ್ಲಿ ಕುಸಿದು ಬಿದ್ದ ನಾಗರಾಜ್ ನನ್ನು ಸ್ನೇಹಿತರು ಬೆಳಗಾವಿ ಜಿಲ್ಲಾಸ್ಪತ್ರೆಗೆ ದಾಖಲಿಸಿದ್ದರು. ಆದರೆ ಚಿಕಿತ್ಸೆ ಫಲಕಾರಿಯಾಗದೆ ನಾಗರಾಜ್ ಸಾವನ್ನಪ್ಪಿದ್ದಾನೆ ಎನ್ನಲಾಗಿದೆ.
ಘಟನೆಯ ನಂತರ ಸ್ಥಳದಿಂದ ಪರಾರಿಯಾಗಲು ಯತ್ನಿಸಿದ್ದ ಆರೋಪಿ ಮಹಿಳೆ ಜಯಶ್ರೀ ಪವಾರ್ ಳನ್ನು, ಸ್ಥಳೀಯರು ಹಿಡಿದು ಪೊಲೀಸರಿಗೆ ಒಪ್ಪಿಸಿದ್ದಾರೆ. ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಗೊಂಡ ಪೊಲೀಸರು ಆರೋಪಿ ಜಯಶ್ರೀ ಪವಾರ್ ಮದ್ಯವ್ಯಸನಿ ಎಂಬುದು ಗೊತ್ತಾಗಿದೆ. ಈ ಹಿಂದೆಯೂ ಹಲವು ಬಾರಿ ಈ ರೀತಿ ಸಾರ್ವಜನಿಕರ ಜೊತೆ ಕಿರಿಕ್ ಸಹ ಮಾಡಿದ್ದಳು ಎನ್ನಲಾಗಿದೆ.