ಬೆಂಗಳೂರು : ರಾಜ್ಯದಲ್ಲಿ ಕಾಂಗ್ರೆಸ್ ಅಭೂತಪೂರ್ವ ಯಶಸ್ಸು ಸಾಧಿಸಿದ್ದು, ಸ್ವಂತ ಬಲದ ಮೇಲೆ ಸರ್ಕಾರ ರಚನೆ ಮಾಡುತ್ತಿದೆ. ನಾಳೆ ನಗರದಲ್ಲಿನ ಕಂಠೀರವ ಕ್ರೀಡಾಂಗಣದಲ್ಲಿ ಸಿದ್ದರಾಮಯ್ಯ (Siddaramaiah) ಮುಖ್ಯಮಂತ್ರಿಯಾಗಿ ಹಾಗೂ ಡಿ.ಕೆ. ಶಿವಕುಮಾರ್ (DK Shivakumar) ಉಪಮುಖ್ಯಮಂತ್ರಿಯಾಗಿ ಮೇ 20ರಂದು ಪ್ರಮಾಣ ವಚನ ಸ್ವೀಕರಿಸಲಿದ್ದಾರೆ.
ಈಗಾಗಲೇ ಕಂಠೀರವ ಮೈದಾನದಲ್ಲಿ ಸಕಲ ಸಿದ್ಧತೆ ಮಾಡಿಕೊಳ್ಳಲಾಗಿದ್ದು, ಪೊಲೀಸ್ ಇಲಾಖೆ ಸ್ಥಳ ಪರಿಶೀಲನೆ ನಡೆಸಿದೆ. ಈ ಸಮಾರಂಭಕ್ಕೆ ಹೊರ ರಾಜ್ಯಗಳಿಂದಲೂ ಹಲವಾರು ನಾಯಕರು ಆಗಮಿಸುತ್ತಿದ್ದಾರೆ.
• ಎಂಕೆ ಸ್ಟಾಲಿನ್- ತಮಿಳುನಾಡು ಮುಖ್ಯಮಂತ್ರಿ
• ನಿತೀಶ್ ಕುಮಾರ್- ಬಿಹಾರ ಮುಖ್ಯಮಂತ್ರಿ
• ಮಮತಾ ಬ್ಯಾನರ್ಜಿ- ಪಶ್ಚಿಮ ಬಂಗಾಳ ಮುಖ್ಯಮಂತ್ರಿ
• ಹೇಮಂತ್ ಸೋರನ್- ಜಾರ್ಖಂಡ್ ಮುಖ್ಯಮಂತ್ರಿ
• ತೇಜಸ್ವಿ ಯಾದವ್- ಬಿಹಾರ ಉಪಮುಖ್ಯಮಂತ್ರಿ
• ಶರದ್ ಪವಾರ್- ಆರ್ಜೆಡಿ ಪಕ್ಷದ ಮುಖ್ಯಸ್ಥ
• ಉದ್ಧವ್ ಠಾಕ್ರೆ- ಮಹಾರಾಷ್ಟ್ರದ ಮಾಜಿ ಮುಖ್ಯಮಂತ್ರಿ
• ಅಖಿಲೇಶ್ ಯಾದವ್- ಉತ್ತರಪ್ರದೇಶದ ಮಾಜಿ ಮುಖ್ಯಮಂತ್ರಿ
• ಫಾರೂಕ್ ಅಬ್ದುಲ್ಲಾ- ಜಮ್ಮುಕಾಶ್ಮೀರದ ಮಾಜಿ ಮುಖ್ಯಮಂತ್ರಿ
• ಮೆಹಬೂಬ ಮುಫ್ತಿ- ಜಮ್ಮುಕಾಶ್ಮೀರದ ಮಾಜಿ ಮುಖ್ಯಮಂತ್ರಿ
• ಸೀತಾರಾಮ್ ಯೆಚೂರಿ- ಸಿಪಿಎಂ ಪ್ರಧಾನ ಕಾರ್ಯದರ್ಶಿ
• ಡಿ.ರಾಜ- ಸಿಪಿಐ ಪ್ರಧಾನ ಕಾರ್ಯದರ್ಶಿ
• ಲಲನ್ ಸಿಂಗ್- ಜೆಡಿಯು ಅಧ್ಯಕ್ಷ
• ವೈಕೊ- ಎಂಡಿಎಂಕೆ ಅಧ್ಯಕ್ಷ
• ಎನ್ಕೆ ಪ್ರೇಮಚಂದ್ರನ್- ಆರ್ಎಸ್ಪಿ ಅಧ್ಯಕ್ಷ
• ದೀಪನ್ಕರ್ ಭಟ್ಟಾಚಾರ್ಯ- ಸಿಪಿಐ (ಎಂಎಲ್) ಪ್ರಧಾನ ಕಾರ್ಯದರ್ಶಿ
• ಡಾ. ಥೋಲ್. ತಿರುಮಾವಲವನ್- ವಿಸಿಕೆ ಅಧ್ಯಕ್ಷ
• ಜಯಂತ್ ಚೌಧರಿ- ಆರ್ಎಲ್ಡಿ ಅಧ್ಯಕ್ಷ
• ಜೋಸ್ ಕೆ ಮಾಣಿ- ಕೇರಳ ಕಾಂಗ್ರೆಸ್ ಅಧ್ಯಕ್ಷ
• ಸಾದಿಕ್ ಅಲಿ ತಂಙಳ್- ಐಯುಎಂಎಲ್ ಅಧ್ಯಕ್ಷ