Kornersite

Just In Sports

IPL 2023: ಕೊಹ್ಲಿ ಹೋರಾಟ ವ್ಯರ್ಥ; ಪ್ಲೇ ಆಫ್ ಗೆ ಏರದ ಬೆಂಗಳೂರು!

ಬೆಂಗಳೂರು: ಆರ್ ಸಿಬಿ ತಂಡವು ಹೋರಾಟದ ಹೊರತಾಗಿಯೂ ಟೂರ್ನಿಯಿಂದ ಹೊರ ಬಿದ್ದಿದೆ.

ಶುಭಮನ್‌ ಗಿಲ್‌ (Shubman Gill) ಭರ್ಜರಿ ಶತಕ, ಆರ್‌ಸಿಬಿ (RCB) ಕಳಪೆ ಬೌಲಿಂಗ್‌ ಹಾಗೂ ಫೀಲ್ಡಿಂಗ್‌ನಿಂದಾಗಿ ಬೆಂಗಳೂರು ತಂಡವು ಗುಜರಾತ್‌ ಟೈಟಾನ್ಸ್‌ (GT) ವಿರುದ್ಧ ಹೀನಾಯ ಸೋಲನುಭವಿಸಿದೆ. ಈ ಮೂಲಕ 2023ರ ಐಪಿಎಲ್‌ (IPL 2023) ಆವೃತ್ತಿಗೆ ಸೋಲಿನೊಂದಿಗೆ ವಿದಾಯ ಹೇಳಿದೆ.

ಗುಜರಾತ್‌ ಟೈಟಾನ್ಸ್‌, ಚೆನ್ನೈ ಸೂಪರ್‌ ಕಿಂಗ್ಸ್‌ (CSK), ಲಕ್ನೋ ಸೂಪರ್‌ ಜೈಂಟ್ಸ್‌ (LSG) ಹಾಗೂ ಮುಂಬೈ ಇಂಡಿಯನ್ಸ್‌ (MI) ಪ್ಲೇ ಆಫ್‌ ಪ್ರವೇಶಿಸಿದೆ. 2022ರ ಆವೃತ್ತಿಯಲ್ಲಿ ಐಪಿಎಲ್‌ ಪ್ರವೇಶಿಸಿದ ಗುಜರಾತ್‌ ಟೈಟಾನ್ಸ್‌ ತಂಡ ಸತತ 2ನೇ ಬಾರಿಯೂ ಪ್ಲೇ ಆಫ್‌ ಗೆ ಏರಿದೆ.
ಟಾಸ್‌ ಸೋತು ಮೊದಲು ಬ್ಯಾಟಿಂಗ್‌ ಮಾಡಿದ ಆರ್‌ಸಿಬಿ 20 ಓವರ್‌ಗಳಲ್ಲಿ 5 ವಿಕೆಟ್‌ ನಷ್ಟಕ್ಕೆ 197 ರನ್‌ ಗಳಿಸಿತ್ತು. ಬೃಹತ್‌ ಮೊತ್ತದ ಗುರಿ ಬೆನ್ನತ್ತಿದ್ದ ಗುಜರಾತ್‌ ಟೈಟಾನ್ಸ್‌ 19.1 ಓವರ್‌ನಲ್ಲಿ 198 ರನ್‌ ಗಳಿಸಿ ಭರ್ಜರಿ ಜಯ ಗಳಿಸಿತು. ಬ್ಯಾಟಿಂಗ್ ಆರಂಭಿಸಿದ ವೃದ್ಧಿಮಾನ್‌ ಸಾಹಾ 14 ಎಸೆತಗಳಲ್ಲಿ 12 ರನ್‌ ಗಳಿಸಿ ಔಟಾದರು. 2ನೇ ವಿಕೆಟ್‌ಗೆ ಜೊತೆಯಾದ ವಿಜಯ್‌ ಶಂಕರ್‌ ಹಾಗೂ ಶುಭಮನ್‌ ಗಿಲ್‌ ಜೋಡಿ ಆರ್‌ಸಿಬಿ ಬೌಲರ್‌ಗಳನ್ನು ಬೆಂಡೆತ್ತಿದರು. 2ನೇ ವಿಕೆಟ್‌ ಪತನಕ್ಕೆ ಈ ಜೋಡಿ 71 ಎಸೆತಗಳಲ್ಲಿ ಬರೋಬ್ಬರಿ 123 ರನ್‌ ಜೊತೆಯಾಟವಾಡಿತು.
ಟೈಟಾನ್ಸ್‌ ಪರ ವಿಜಯ್‌ ಶಂಕರ್‌ 53 ರನ್‌, ವೃದ್ಧಿಮಾನ್‌ ಸಾಹಾ 12 ರನ್‌, ಡೇವಿಡ್‌ ಮಿಲ್ಲರ್‌ 6 ರನ್‌ ಗಳಿಸಿದರೆ ಧಸುನ್‌ ಶನಾಕ ಶೂನ್ಯಕ್ಕೆ ಔಟಾಗಿ ಪೆವಿಲಿಯನ್‌ ಸೇರಿದರು. ಕೊನೆಯವರೆಗೂ ಹೋರಾಡಿದ ಶುಭಮನ್‌ ಗಿಲ್‌ 52 ಎಸೆತಗಳಲ್ಲಿ 104 ರನ್‌ ಗಳಿಸಿ ಗೆಲುವು ತಂದು ಕೊಟ್ಟರು.

ಮೊದಲು ಬ್ಯಾಟಿಂಗ್‌ ಮಾಡಿದ ಆರ್‌ಸಿಬಿ ಆರಂಭದಿಂದಲೇ ವಿಕೆಟ್‌ ಕಳೆದುಕೊಂಡರೂ ರನ್‌ ಕಲೆಹಾಕುತ್ತಾ ಸಾಗಿತು. ಫಾಫ್‌ ಡು ಪ್ಲೆಸಿಸ್‌ ಹಾಗೂ ವಿರಾಟ್‌ ಕೊಹ್ಲಿ ಜೋಡಿ ಮುರಿಯುತ್ತಿದ್ದಂತೆ ರನ್‌ ವೇಗವೂ ಕಡಿಮೆಯಾಯಿತು. ಮೊದಲ ವಿಕೆಟ್‌ಗೆ ಡುಪ್ಲೆಸಿಸ್‌ ಹಾಗೂ ಕೊಹ್ಲಿ 7.1 ಓವರ್‌ಗಳಲ್ಲಿ 67 ರನ್‌ ಜೊತೆಯಾಟವಾಡಿದ್ದರು. ಡುಪ್ಲೆಸಿಸ್‌ ಔಟಾಗುತ್ತಿದ್ದಂತೆ ಕೊಹ್ಲಿ ಏಕಾಂಗಿ ಹೋರಾಟ ನಡೆಸಿದರು. ಕೊಹ್ಲಿ 61 ಎಸೆತಗಳಲ್ಲಿ 101 ರನ್‌, ಡುಪ್ಲೆಸಿಸ್‌ 28 ರನ್‌, ಮ್ಯಾಕ್ಸ್‌ವೆಲ್‌ 11 ರನ್‌, ಮೈಕೆಲ್‌ ಬ್ರೇಸ್‌ವೆಲ್‌ 26 ರನ್‌, ಅನುಜ್‌ ರಾವತ್‌ 23 ರನ್‌, ಗಳಿಸಿದರೆ, ದಿನೇಶ್‌ ಕಾರ್ತಿಕ್‌ ಮತ್ತೊಮ್ಮೆ ಡಕೌಟ್‌ ಆಗಿ ನಿರಾಸೆ ಮೂಡಿಸಿದರು.

You may also like

Sports

ಡಿವೈನ್ ಭರ್ಜರಿ ಆಟಕ್ಕೆ ಮಂಕಾದ ಜೈಂಟ್ಸ್!

ಮುಂಬಯಿ : ಆಲ್‌ ರೌಂಡರ್‌ ಸೋಫಿ ಡಿವೈನ್‌ ಭರ್ಜರಿ ಆಟಕ್ಕೆ ಗುಜರಾತ್ ಜೈಂಟ್ಸ್ ತಂಡವು ಸೋಲು ಒಪ್ಪಿಕೊಳ್ಳುವಂತಾಯಿತು.ಗುಜರಾತ್‌ ಜೈಂಟ್ಸ್‌ ವಿರುದ್ಧ ಆರ್ ಸಿಬಿ 8 ವಿಕೆಟ್‌ ಗಳ
Sports

ಮಾಜಿ ಕ್ರಿಕೆಟಿಗ ಸಲೀಂ ದುರಾನಿ ಇನ್ನಿಲ್ಲ!

ನವದೆಹಲಿ : ಭಾರತೀಯ ಕ್ರಿಕೆಟ್ ತಂಡದ ಮಾಜಿ ಸ್ಟಾರ್ ಹಾಗೂ ಆಲ್ ರೌಂಡರ್ ಆಟಗಾರ ಸಲೀಂ ದುರಾನಿ ವಯೋಸಹಜ ಕಾಯಿಲೆಯಿಂದಾಗಿ ಸಾವನ್ನಪ್ಪಿದ್ದಾರೆ.1960ರ ದಶಕದಲ್ಲಿ ಭಾರತದ ಆಲ್ ರೌಂಡರ್