ಮನೆ ಮುಂದೆ ಬೈಕ್ ನಿಲ್ಲಿಸೋ ವಿಚಾರಕ್ಕೆ ಶುರುವಾದ ಚಿಕ್ಕ ಜಗಳ ಮಾರಣಾಂತಿಕ ಹಲ್ಲೆಯಲ್ಲಿ ಅಂತ್ಯವಾಗಿದೆ. ಈ ಘಟನೆ ನಡೆದಿರೋದು ವಿಜಯಪುರದ ಟಕ್ಕೆಯಲ್ಲಿ.
ಅಸಲಿಗೆ ಕಿರಣ್ ಗಜಕೋಶ ಎನ್ನುವವರು ಮನೆಯ ಎದುರು ಇರುವ ಬಸಯ್ಯ ಹಿರೇಮಟ ಎನ್ನುವವರಿಗೆ ನಮ್ಮ ಕಾರು ಬರುತ್ತದೆ. ನೀವು ನಿಲ್ಲಿಸಿದ ಬೈಕೆ ತೆಗಿರಿ ಎಂದು ಹೇಳಿದ್ದಾರೆ. ಹಿಗೆ ಮಾತಿಗೆ ಮಾತು ಬೆಳೀತಾನೇ ಇತ್ತು. ಆದ್ರೆ ಅಷ್ಟೋತ್ತಿಗೆ ಆಸಾಮಿ ಮನೆಯೊಳಗಿದ್ದ ಮಚ್ಚು ಹಿಡಿದು ಬಂದು ಏಕಾಏಕಿಯಾಗಿ ಕತ್ತಿಗೆ ಮಚ್ಚು ಬೀಸಿದ್ದಾನೆ. ಮನೆ ಮುಂದೆ ನಡೆದ ಘಟನೆ ಪಕ್ಕದ ಮನೆಯಲ್ಲಿರುವ ಸಿಸಿಟಿವಿಯಲ್ಲಿ ಸೆರೆಯಾಗಿದೆ.
ಇಷ್ಟಕ್ಕೆ ಮುಗಿಲಿಲ್ಲ ನೋಡಿ ಮನೆಯಿಂದ ಹೊರಗೆ ಬಂದ ಹೆಂಗಸು ಕೊಡಲಿಯಿಂದ ಹೊಡೆಯುವುದಕ್ಕೆ ಮುಂದಾಗಿದ್ದಾಳೆ. ಒಂದು ಕಡೆ ಲೇಡೀಸ್ ಫೈಟಿಂಗ್ ನಡೆಸಿದರೇ, ಮತ್ತೊಂದು ಕಡೆ ಮತ್ತು ಬೀಸಿದವನನ್ನ ಜನರು ಕಂಟ್ರೋಲ್ ಮಾಡುತ್ತಿದ್ದಾರೆ. ಅದೃಷ್ಟವಶಾತ್ ಕಿರಣ್ ಗಜಕೋಶ ಯಾವುದೇ ರೀತಿಯ ಪ್ರಾಣಾಪಾಯವಾಗಿಲ್ಲ. ಸದ್ಯ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದು, ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದಾರೆ.

