Kornersite

Crime Just In Karnataka State

ರೈತನ ಹೊಲದಿಂದ 2 ಲಕ್ಷಕ್ಕೂ ಹೆಚ್ಚು ಮೌಲ್ಯದ ಟೊಮೆಟೊ ಕಳ್ಳತನ

Hassan: ಟೊಮೆಟೊ (Tomato)ದರ ಹೆಚ್ಚಾಗ್ತಾ ಇದ್ದಂತೆ ರೈತರಿಗೆ (Farmer) ಟೊಮೆಟೊ ಕಾಯೋದೇ ಒಂದು ದೊಡ್ಡ ತಲೆನೊವಾಗಿ ಬಿಟ್ತಿದೆ. ಇತ್ತೀಚೆಗೆ ರೈತನೊಬ್ಬ ಸಂತೆಯಲ್ಲಿ (Market) ಟೊಮೆಟೊ ಮಾರುವಾಗ ಸಿಸಿಟಿವಿ (CCTV) ಹಾಕಿದ್ದ. ಟೊಮೆಟೊ ಇದೀಗ ಬಂಗಾರದ ಬೆಲೆಯಾಗಿ ಬಿಟ್ಟಿದೆ. ಬಂಗಾರ ಕದಿಯುವಂತೆ ಕಳ್ಳರು ಟೊಮೆಟೊ ಕದಿಯಲು ಮುಂದಾಗಿದ್ದಾರೆ. ಹಾಸನದಲ್ಲೂ ಇದೇ ರೀತಿಯ ಘಟನೆ ನಡೆದಿದೆ. ಬರೋಬ್ಬರು 2 ಲಕ್ಷಕ್ಕೂ ಹೆಚ್ಚು ಮೌಲ್ಯದ ಟೊಮೆಟೊವನ್ನು ರೈತರ ಹೊಲದಿಂದ ಕಳ್ಳರು ಕದ್ದಿದ್ದಾರೆ.

ಹಾಸನದ ಬೇಲೂರು ತಾಲೂಕಿನ ಗೋಣಿ ಸೋಮನಹಳ್ಳಿ ಗ್ರಾಮದಲ್ಲಿ ಕಳ್ಳರು ಟೊಮೆಟೊ ಕದ್ದಿದ್ದಾರೆ. 2 ಎಕರೆ ಜಮೀನಿನಲ್ಲಿ ಬೆಳೆದ ಒಂದೂವರೆ ಲಕ್ಷಕ್ಕೂ ಅಧಿಕ ಮೌಲ್ಯದ ಟೊಮೆಟೊ ಕದ್ದು ಪರಾರಿಯಾಗಿದ್ದಾರೆ. ಸೋಮಶೇಖರ್ ಹಾಗೂ ಅವರ ಪುತ್ರ ತಮ್ಮ ಹೊಲದಲ್ಲಿ ಟೊಮೆಟೊ ಬೆಳೆದಿದ್ದಾರೆ. ಈ ಬಾರಿ ಚೆನ್ನಾಗಿ ಇಳುವರಿ ಬಂದ ಹಿನ್ನೆಲೆ ಕಳೆದ ಮೂರು ದಿನಗಳಿಂದ ಟೊಮೆಟೊ ಮಾರಾಟ ಮಾಡುತ್ತಿದ್ದಾರೆ. ಉತ್ತಮ ಆದಾಯದ ನಿರೀಕ್ಷೆಯಲ್ಲಿ ಇದ್ದರು. ದುಷ್ಕರ್ಮಿಗಳು ಬೆಳೆಯನ್ನು ಸಂಪೂರ್ಣ ಹಾಳು ಮಾಡಿದ್ದಾರೆ. ಮಂಗಳವಾರ ರಾತ್ರಿ ಹೊಲಕ್ಕೆ ನುಗ್ಗಿದ ಕಳ್ಳರು, 50 ರಿಂದ 60 ಬ್ಯಾಗ್ ನಷ್ಟು ಟೊಮೆಟೊ ಕುಯ್ದಿದ್ದಾರೆ. ಅಂದಾಜು 2 ಲಕ್ಷದಷ್ಟು ಟೊಮೆಟೊ ಕಳ್ಳತನ ಮಾಡಿ ಪರಾರಿಯಾಗಿದ್ದಾರೆ. ಮಾರನೇ ದಿನ ಬೆಳಗ್ಗೆ ಹೊಲಕ್ಕೆ ಬಂದು ನೋಡಿದಾಗ ಶಾಕ್ ಆಗಿದೆ.

ಈ ಬಗ್ಗೆ ಪೊಲೀಸರಿಗೆ ದೂರು ನೀಡಿದ್ದು, ಸ್ಥಳಕ್ಕೆ ಬಂದ ಹಿರಿಯ ತೋಟಗಾರಿಕಾ ಇಲಾಖೆಯವರು ಪರಿಹಾರ ನೀಡುವುದಾಗಿ ಭರವಸೆ ನೀಡಿದ್ದಾರೆ.

You may also like

Crime Karnataka State

ಕೊಲೆಯಲ್ಲಿ ಅಂತ್ಯವಾದ ವ್ಹೀಲಿಂಗ್ ಗಲಾಟೆ

ಹಾಸನ : ವ್ಹೀಲಿಂಗ್ ವಿಷಯಕ್ಕೆ ಸಂಬಂಧಿಸಿದಂತೆ ಶುರುವಾದ ಜಗಳ ಕೊಲೆಯಲ್ಲಿ ಅಂತ್ಯವಾಗಿರುವ ಘಟನೆ ಜಿಲ್ಲೆಯ ಗವೇನಹಳ್ಳಿಯಲ್ಲಿ ನಡೆದಿದೆ.ಘಟನೆಯಲ್ಲಿ ಆಟೋ ಚಾಲಕ ಸುಮಂತ್ (20) ಕೊಲೆಯಾದ ದುರ್ದೈವ ಯುವಕ.
Crime

ಬೈಕ್ ನಲ್ಲಿಯೇ ಸಹೋದರಿಯ ಶವ ಸಾಗಿಸಿದ ಅಣ್ಣ!

ನವದೆಹಲಿ : ಆಂಬುಲೆನ್ಸ್ ಬರುವುದಕ್ಕೆ ನಿರಾಕರಿಸಿರುವ ಹಿನ್ನೆಲೆಯಲ್ಲಿ ಯುವಕನೊಬ್ಬ ತನ್ನ ಸಹೋದರಿಯ ಮೃತ ದೇಹವನ್ನು ಬೈಕ್ ನಲ್ಲಿಯೇ ತೆಗೆದುಕೊಂಡು ಹೋಗಿರುವ ಅಮಾನವೀಯ ಘಟನೆ ಉತ್ತರ ಪ್ರದೇಶದ ಕೌಶಾಂಬಿಯಲ್ಲಿ