Kornersite

Gossip Just In Mix Masala State

ಟೊಮೆಟೊ ತಂದ ಆಪತ್ತು: ಟೊಮೆಟೊ ಬಳಸಿದ್ದಕ್ಕೆ ಮನೆ ಬಿಟ್ಟು ಹೋದ ಪತ್ನಿ

Madhya Pradesh: ಟೊಮೆಟೊ ದರ ದಿನದಿಂದ ದಿನಕ್ಕೆ ಹೆಚ್ಚಾಗ್ತಾನೇ ಇದೆ. ಟೊಮೆಟೊ ಖದಿಯೋರು ಕೂಡ ಹೆಚ್ಚಾಗ್ತಾ ಇದ್ದಾರೆ. ಇನ್ನು ಕಳ್ಳರ ಹಾವಳಿಗೆ ರೈತರು ಬೌನ್ಸರ್ ಗಳನ್ನು ನೇಮಕ ಮಾಡಿಕೊಳ್ಳೋದು ಹಾಗೂ ಸಿಸಿಟಿವಿ ಅಳವಡಿಸಿಕೊಳ್ಳೋ ಸುದ್ದಿಗಳು ಕೇಳ್ತಾನೆ ಇದ್ದೇವೆ. ಟೊಮೆಟೊ ದರ ಹೆಚ್ಚಾದಂತೆ ಚಿತ್ರ ವಿಚಿತ್ರ ಸುದ್ದಿಗಳು ಸೋಶಿಯಲ್ ಮೀಡಿಯಾದಲ್ಲಿ ಬರ್ತಾನೇ ಇವೆ. ಈ ಟೊಮೆಟೊಗಾಗಿ ದಂಪತಿಗಲು ದೂರ ಆಗಿರುವ ಘಟನೆ ಮಧ್ಯ ಪ್ರದೇಶದಲ್ಲಿ ನಡೆದಿದೆ.

ಟೊಮೆಟೊದಿಂದ ದಂಪತಿಗಳು ದೂರ ಆಗಿದ್ದಾರಾ ಎಂದು ಹುಬ್ಬು ಹಾರಿಸಬೇಡಿ ಇದು ನಿಜ ಕಣ್ರೀ. ಟೊಮೆಟೊದಿಂದಲೇ ದಂಪತಿಗಳು ದೂರ ಆಗಿದ್ದಾರೆ. ಗಂಡ ಅಡುಗೆ ಮಾಡುವಾಗ ತನ್ನ ಪತ್ನಿಯನ್ನು ಕೇಳದೇ ಟೊಮೆಟೊ ಬಳಸಿದ್ದಾನೆ ಎನ್ನುವ ಕಾರಣಕ್ಕೆ ಜಗಳ ಶುರುವಾಗಿದೆ. ಜಸ್ಟ್ ಸಿಂಪಲ್ ರೀಸನ್ ಗೆ ಪತ್ನಿ ಮನೆ ಬಿಟ್ಟು ಹೋಗಿದ್ದಾಳೆ.

ಸಂಜಿವ್ ಬರ್ಮನ್ ಎನ್ನುವವರು ಮಧ್ಯಪ್ರದೇಶದ ಶಾಹದೋಲ್ ಜಿಲ್ಲೆಯಲ್ಲಿ ಟಿಫಿನ್ ಸರ್ವಿಸ್ ನಡೆಸುತ್ತಿದ್ದರು. ಟೊಮೆಟೊ ಹೆಚ್ಚಾಗಿ ಬಳಸಿ ಗಂಡ ಅಡುಗೆ ಮಾಡಿದ್ದಾನೆ. ಈ ವಿಚಾರ ಪತ್ನಿಯ ಗಮನಕ್ಕೆ ಬಂದಿಲ್ಲ. ಊಟ ಮಾಡುವ ಸಮಯದಲ್ಲಿ ಗಮನಿಸಿದಾಗ ಟೊಮೆಟೊ ಹೆಚ್ಚಾಗಿ ಬಳಕೆಯಾಗಿರೋದು ಬೆಳಕಿಗೆ ಬಂದಿದೆ. ಇದೇ ವಿಚಾರಕ್ಕೆ ಪತ್ನಿ ಪತಿಯ ಮೇಲೆ ರೇಗಾಡಿದ್ದಾಳೆ. ಟೊಮೆಟೊ ವಿಚಾರಕ್ಕೆ ಇಬ್ಬರ ನಡುವೆ ಮಾತಿಗೆ ಮಾತು ಬೆಳೆದಿದೆ. ಕೊನೆಗೆ ಜಗಳ ವಿಕೋಪಕ್ಕೆ ಹೋಗಿದ್ದು, ಪತ್ನಿ ತನ್ನ ಮಗಳ ಜೊತೆ ಮನೆ ಬಿಟ್ಟು ಹೋಗಿದ್ದಾಳೆ.

You may also like

Crime Karnataka State

ಕೊಲೆಯಲ್ಲಿ ಅಂತ್ಯವಾದ ವ್ಹೀಲಿಂಗ್ ಗಲಾಟೆ

ಹಾಸನ : ವ್ಹೀಲಿಂಗ್ ವಿಷಯಕ್ಕೆ ಸಂಬಂಧಿಸಿದಂತೆ ಶುರುವಾದ ಜಗಳ ಕೊಲೆಯಲ್ಲಿ ಅಂತ್ಯವಾಗಿರುವ ಘಟನೆ ಜಿಲ್ಲೆಯ ಗವೇನಹಳ್ಳಿಯಲ್ಲಿ ನಡೆದಿದೆ.ಘಟನೆಯಲ್ಲಿ ಆಟೋ ಚಾಲಕ ಸುಮಂತ್ (20) ಕೊಲೆಯಾದ ದುರ್ದೈವ ಯುವಕ.
Entertainment Gossip Mix Masala

ಆಸ್ಕರ್ ಇವೆಂಟ್ ನಲ್ಲಿ ಭಾಗವಹಿಸಲು ಹಣದ ಹೊಳೆಯನ್ನೇ ಹರಿಸಿರುವ ರಾಜಮೌಳಿ ಹಾಗೂ ತಂಡ

ಸ್ಟಾರ್ ನಿರ್ದೇಶಕ ರಾಜಮೌಳಿ ಅವರ ಶ್ರಮದಿಂದಾಗಿ ಭಾರತಕ್ಕೆ ಆಸ್ಕರ್ ಪ್ರಶಸ್ತಿ ಬರುವಂತಾಗಿದೆ. ಆರ್ ಆರ್ ಆರ್ ಚಿತ್ರದ ನಾಟು ನಾಟು ಹಾಡು ಆಸ್ಕರ್ ಪ್ರಶಸ್ತಿ ಗೆದ್ದುಕೊಂಡಿದೆ. ಆದರೆ,