ರಾಜ್ಯದ ಜನರ ಅಕೌಂಟ್ ಗೆ ಹತ್ತು ಸಾವಿರ ಹಣವನ್ನು ಸರ್ಕಾರ ಹಾಕಲಿದೆ. ಈ ಗುಡ್ ನ್ಯೂಸ್ (Good News) ಕೊಟ್ಟಿದ್ದು ಆಂಧ್ರಪ್ರದೇಶದ (Andhra Pradesh) ಜಗನ್ (Jagan)ಸರ್ಕಾರ. ಜಗನಣ್ಣ ತೋಡು ಯೋಜನೆಗೆ (scheme)ಸಂಬಂಧಿಸಿದ ಹಣವನ್ನು ನಾಳೆ ಬಿಡುಗಡೆ ಮಾಡಲಿದ್ದಾರೆ. ಜಗನಣ್ಣ ತೋಡು ಯೋಜನೆಯ ಭಾಗವಾಗಿ ಜಗನ್ ಮೋಹನ್ ಆಡಳಿತಾವಧಿಯಲ್ಲಿ ನಾಲ್ಕನೇ ವರ್ಷದಲ್ಲಿ ಮೊದಲ ಕಂತಿನ ಕಾರ್ಯಕ್ರಮ ನಡೆಸಿ, ಅರ್ಹ ಫಲಾನುಭವಿಗಳ ಖಾತೆಗೆ ತಲಾ ಹತ್ತು ಸಾವಿರ ರೂಪಾಯಿ ಹಣವನ್ನು ಜಮೆ ಮಾಡಲು ರಾಜ್ಯ ಸರ್ಕಾರ ನಿರ್ಧರಿಸಿದೆ.
ಈ ಯೋಜನೆಯ ಭಾಗವಾಗಿ ಆಂಧ್ರ ಪ್ರದೇಶದ 5.1 ಲಕ್ಷ ಜನರ ಖಾತೆಗಳಿಗೆ ತಲಾ ಹತ್ತು ಸಾವಿರದಂತೆ 510 ಕೋಟಿಯನ್ನು ಸರ್ಕಾರ ಜಮಾ ಮಾಡಲು ನಿರ್ಧಾರ ಮಾಡಿದೆ. ಇಷ್ಟೇ ಅಲ್ಲ ಬಡ್ದಿ ಮನ್ನಾ ಅಡಿಯಲ್ಲಿ 4.58 ಲಕ್ಷ ಜನರಿಗೆ ಹತ್ತು ಕೊಟಿ ರೂಪಾಯಿ ಹಣ ವ್ಯಯ ಆಗಲಿದೆ. ಜಗನಣ್ಣ ತೋಡು ಯೋಜನೆಯ ಭಾಗವಾಗಿ ಆಂಧ್ರ ಪ್ರದೇಶದ ಸುಮಾರು 5.1 ಲಕ್ಷ ಜನರ ಖಾತೆಗಳಿಗೆ ತಲಾ ಹತ್ತು ಸಾವಿರ ರೂಪಾಯಿ ಹಣ ಸಿಗಲಿದೆ.
ಆಂದ್ರದ ಸಣ್ಣ ವ್ಯಾಪಾರಿಗಳಿಗೆ ಸಹಾಯವಾಗುತ್ತದೆ ಎನ್ನುವ ನಿಟ್ಟಿನಲ್ಲಿ ಈ ಯೋಜನೆ ತಂದಿದೆ. ಕಳೆದ ನಾಲ್ಕು ವರ್ಷಗಳಿಂದ ರಾಜ್ಯ ಸರ್ಕಾರದ ವತಿಯಿಂದ ಈ ಕಾರ್ಯಕ್ರಮ ನಡೆಯುತ್ತಿದೆ.