ಭೀಮನ ಅಮವಾಸ್ಯೆ ದಿನದಂದೇ ಪತ್ನಿಯ ಕಣ್ಣೆದುರೇ ಪತಿಯ ಕೊಲೆ ನಡೆದಿರೋ ಘಟನೆ ಬೆಳಗಾವಿಯ ಮೂಡಲಗಿ ತಾಲೂಕಿನ ಬನಸಿದ್ದೇಶ್ವರ ದೇವಸ್ಥಾನದ ಮುಂದೆ ನಡೆದಿದೆ.
ಶಂಕರ್ ಹಾಗೂ ಪ್ರಿಯಾಂಕಾ ದಂಪತಿ ಅಮವಾಸ್ಯೆ ಇದೆ ಎಂದು ದೇವಸ್ಥಾನಕ್ಕೆ ಹೋಗಿದ್ದರು. ಅದೇ ವೇಳೆ ಲಾಂಗು, ಮಚ್ಚು ಹಿಡಿದುಕೊಂಡು ಬಂದ ದುಷ್ಕರ್ಮಿಗಳು ಪತ್ನಿಯ ಎದುರಿಗೇ 25 ವರ್ಷದ ಶಂಕರ್ ಸಿದ್ದಪ್ಪ ಜಗಮುತ್ತಿ ಎನ್ನುವನನ್ನು ಕೊಚ್ಚಿ ಕೊಲೆ ಮಾಡಿದ್ದಾರೆ.
ಮೃತ ಶಂಕರ್ ಕಳೆದ ಮೂರು ತಿಂಗಳ ಹಿಂದೆಯಷ್ಟೇ ಮದುವೆಯಾಗಿದ್ದರು. ಅಮವಾಸ್ಯೆ ಹಿನ್ನೆಲೆ ಪತ್ನಿ ಪ್ರಿಯಾಂಕಾಳನ್ನು ಕರೆದುಕೊಂಡು ದೇವಸ್ಥಾನಕ್ಕೆ ಹೋಗಿದ್ದ ಶಂಕರ್. ಕೊಲೆಗೆ ಕಾರಣ ಇನ್ನು ತಿಳಿದುಬಂದಿಲ್ಲ. ಕೂಡಲೇ ಸ್ಥಳಕ್ಕೆ ಬಂದ ಪೊಲೀಸರು ಪ್ರಕರಣ ದಾಖಲಿಸಿಕೊಂಡು ತನಿಖೆ ನಡೆಸುತ್ತಿದ್ದಾರೆ.