Kornersite

Just In Karnataka State

ಅನಾಥ ಆನೆ ಮರಿಗೆ ಆಸರೆಯಾದ ಕಾವಾಡಿ ದಂಪತಿ

‘The Elephant Whisperers’ ಕಿರುಚಿತ್ರ ಯಾರಿಗೆ ತಾನೇ ಗೊತ್ತಿಲ್ಲ ಹೇಳಿ. ಈ ಕಿರುಚಿತ್ರ ಆಸ್ಕರ್ (Oscar) ಗೆ ನಾಮಿನೇಟ್ ಆಗಿ ಪ್ರಶಸ್ತಿಯನ್ನೂ ಗಿಟ್ಟಿಸಿಕೊಂಡಿದೆ. ಅನಾಥ ಆನೆ (Elephant) ಮರಿಗಳನ್ನ ಮಕ್ಕಳಂತೆ ನೋಡಿಕೊಳ್ಳುವ ದಂಪತಿ. ಮೂಕ ಪ್ರಾಣಿ ಹಾಗೂ ತಂದೆ-ತಾಯಿಯಂತೆ ನೋಡಿಕೊಳ್ಳುವ ದಂಪತಿಯ ಪ್ರೀತಿ ಬಾಂಧವ್ಯದ ಕಿರುಚಿತ್ರವಿದು. ಅದೇ ರೀತಿ ಕಾವಾಡಿ ದಂಪತಿಯೊಬ್ಬರು ಅನಾಥ ಆನೆ ಮರಿಯೊಂದನ್ನ ಸ್ವಂತ ಮಗುವಿನಂತೆ ನೋಡಿಕೊಳ್ಳುತ್ತಿದ್ದಾರೆ.

ಬಂಡೀಪುರ ಹುಲಿ ಸಂರಕ್ಷಿತಾರಣ್ಯ ಪ್ರದೇಶದ ರಾಂಪುರ ಆನೆ ಶಿಬಿರದ ಕಾವಾಡಿ ರಾಜು ಮತ್ತು ರಮ್ಯಾ ಆನೆ ಮರಿಯನ್ನು ಕಳೆದ ಏಳು ತಿಂಗಳಿನಿಂದ ನೋಡಿಕೊಳ್ಳುತ್ತಿದ್ದಾರೆ. ಇವರು ಈ ಆನೆ ಮರಿಯನ್ನು ತಮ್ಮ ಮೊದಲನೇ ಹೆಣ್ಣು ಮಗು ಎಂದು ಹೇಳುತ್ತಾರೆ. ಆನೆ ಮರಿಯ ಹೆಸರು ವೇದಾ. ಏಳು ತಿಂಗಳ ಹಿಂದೆ ವೇದಾ ನಗು ವಲಯದ ಅರಣ್ಯದಲ್ಲಿ ತನ್ನ ತಾಯಿಯಿಂದ ಏರ್ಪಟ್ಟಿದ್ದಳು. ಇದೀಗ ರಾಜು ಹಾಗೂ ರಮ್ಯಾ ಮಡಿಲು ಸೇರಿರುವ ವೇದಾ ಮಗುವಿನಂತೆ ದಂಪತಿಯ ಜೊತೆ ಖುಷಿಯಾಗಿ ಇದ್ದಾಳೆ.

ಈ ವೇದಾ ತನ್ನ ತಾಯಿಯಿಂದ ಬೇರ್ಪಟ್ಟಾಗ ಕೇವಲ 14 ದಿನಗಳ ಮಗು. ಈ ಮರಿಯನ್ನು ಅರಣ್ಯಾ ಇಲಾಖೆಯವರು ರಕ್ಷಿಸಿದ್ದರು. ಇಲಾಖೆಯವರೇ ರಾಜು ಹಾಗು ರಮ್ಯಾ ದಂಪತಿಗೆ 14 ದಿನಗಳ ಆನೆ ಮರಿಯನ್ನು ಒಪ್ಪಿಸಿದ್ದಾರೆ. ಇದೀಗ ಕಾವಾಡಿ ದಂಪತಿ ವೇದಾಳನ್ನು ತಮ್ಮ ಸ್ವಂತ ಮಗಳಂತೆ ನೋಡಿಕೊಳ್ಳುತ್ತಿದ್ದಾರೆ.

You may also like

Crime Karnataka State

ಕೊಲೆಯಲ್ಲಿ ಅಂತ್ಯವಾದ ವ್ಹೀಲಿಂಗ್ ಗಲಾಟೆ

ಹಾಸನ : ವ್ಹೀಲಿಂಗ್ ವಿಷಯಕ್ಕೆ ಸಂಬಂಧಿಸಿದಂತೆ ಶುರುವಾದ ಜಗಳ ಕೊಲೆಯಲ್ಲಿ ಅಂತ್ಯವಾಗಿರುವ ಘಟನೆ ಜಿಲ್ಲೆಯ ಗವೇನಹಳ್ಳಿಯಲ್ಲಿ ನಡೆದಿದೆ.ಘಟನೆಯಲ್ಲಿ ಆಟೋ ಚಾಲಕ ಸುಮಂತ್ (20) ಕೊಲೆಯಾದ ದುರ್ದೈವ ಯುವಕ.
Bengaluru State

ಬೈಕ್, ಟ್ಯಾಕ್ಸಿ ಬಂದ್ ಮಾಡುವಂತೆ ಆಗ್ರಹಿಸಿ ಮುಷ್ಕರ!

ಬೆಂಗಳೂರು : ಸಿಲಿಕಾನ್ ಸಿಟಿಯಲ್ಲಿ ವೈಟ್ ಬೋರ್ಡ್ ಬೈಕ್‌ ಟ್ಯಾಕ್ಸಿಗಳನ್ನು ಬಂದ್ ಮಾಡುವಂತೆ ಆಗ್ರಹಿಸಿ ಆಟೋ ಚಾಲಕರು ಹಾಗೂ ಸಂಘಟನೆಗಳು ಭಾನುವಾರ ಮಧ್ಯರಾತ್ರಿಯಿಂದ ಸೇವೆ ಸ್ಥಗಿತಗೊಳಿಸಿ ಮುಷ್ಕರ