ಮಾಹಿತಿ ಕಳ್ಳತನ ಮಾಡಿ ಸುಲಿಗೆಗೆ ಕಾರಣವಾಗುತ್ತಿರುವ ಡೇಟಾವನ್ನು ಎನ್ಕ್ರಿಪ್ಟ್ ಮಾಡುವ “ಅಕಿರಾ” ಎಂಬ ಇಂಟರ್ನೆಟ್ ರಾನ್ಸಮ್ವೇರ್ ವಿರುದ್ಧ ಜನರ ಎಚ್ಚರವಾಗಿರಬೇಕೆಂದು ಕೇಂದ್ರ ಸರ್ಕಾರ ಎಚ್ಚರಿಕೆ ನೀಡಿದೆ.
ಭಾರತೀಯ ಕಂಪ್ಯೂಟರ್ ತುರ್ತು ಪ್ರತಿಕ್ರಿಯೆ ತಂಡವು ಮಾಲ್ವೇರ್ ವಿಂಡೋಸ್ ಮತ್ತು ಲಿನಕ್ಸ್-ಆಧಾರಿತ ಸಿಸ್ಟಮ್ಗಳನ್ನು ಗುರಿಯಾಗಿಸುವ “ಅಕಿರಾ” ಬಗ್ಗೆ ಸಲಹೆ ನೀಡಿದೆ. ಇದು ಮಾಹಿತಿ ಕಳ್ಳತನ ಮಾಡಿ ಜನರ ಬಳಿ ಸುಲಿಗಾಗಿ ಬೇಡಿಕೆ ಇಡಲಾಗುತ್ತದೆ ಎಂದು ಎಂದು ಸಿಇಆರ್ಟಿ ಹೇಳಿದ್ದಾರೆ.
ಹಣ ನೀಡದಿದ್ದರೆ ತಮ್ಮ ಡಾರ್ಕ್ ವೆಬ್ ಬ್ಲಾಗ್ನಲ್ಲಿ ಡೇಟಾ ಬಿಡುಗಡೆ ಮಾಡುತ್ತಾರೆ ಎಂದು ಸಲಹೆ ನೀಡಲಾಗಿದ್ದು, ಇಂತಹ ದಾಳಿಗಳಿಂದ ತಮ್ಮನ್ನು ರಕ್ಷಿಸಿಕೊಳ್ಳಲು ಇಂಟರ್ನೆಟ್ ಬಳಕೆದಾರರು ಮೂಲಭೂತ ಆನ್ಲೈನ್ ನೈರ್ಮಲ್ಯ ಮತ್ತು ರಕ್ಷಣೆ ಪ್ರೋಟೋಕಾಲ್ಗಳನ್ನು ಬಳಸಬೇಕೆಂದು ತಂತ್ರಜ್ಞಾನ ವಿಭಾಗವು ಸಲಹೆ ನೀಡಿದೆ.