Kornersite

Crime Just In Karnataka State

ಕುಡಿದ ಮತ್ತಿನಲ್ಲಿ 2 ವರ್ಷದ ಮಗುವನ್ನ ಕೊಂದ ಪಾಪಿ ತಂದೆ!

ಕೋಲಾರ: ಈ ಪಾಪಿ ತಂದೆ ಮಾಡಿರೋದನ್ನ ಕೇಳಿದ್ರೆ ಯಾರಿಗಾದ್ರು ಕರಳು ಚುರುಕ್ ಅನ್ನುತ್ತೆ. ಕುಡಿದ ಮತ್ತಿನಲ್ಲಿ ತನ್ನ ಎರಡು ವರ್ಷದ ಮಗುವನ್ನೇ ಕೊಂದಿದ್ದಾನೆ. ಅಸಲಿಗೆ ಈ ಘಟನೆ ನಡೆದಿರೋದು ಕೋಲಾರ ಜಿಲ್ಲೆ ಮುಳಬಾಗಿಲು ತಾಲೂಕಿನ ಕೆ.ಬಿ ಕೊತ್ತೂರು ಗ್ರಾಮದಲ್ಲಿ.

ಇಂತ ಹೇಯ್ಯ ಕೃತ್ಯ ಮಾಡಿದವನ ಹೆಸರು ಗಂಗಾಧರ. ಕೂಲಿ ಕೆಲಸ ಮಾಡಿಕೊಂಡಿದ್ದ ಗಂಗಾಧರ 9 ವರ್ಷಗಳ ಹಿಂದೆ ರೇಣುಕಾ ಎನ್ನುವವಳನ್ನ ಪ್ರೀತಿಸಿ ಮದುವೆಯಾಗಿದ್ದ. ಈ ದಂಪತಿಗೆ ಮೂರು ಜನ ಮಕ್ಕಳು ಇದ್ದಾರೆ. ಆದ್ರೆ ಗಂಗಾಧರ ಸದಾ ಕುಡಿದು ಬಂದು ಮನೆಯಲ್ಲಿ ಗಲಾಟೆ ಮಾಡುತ್ತಿದ್ದ. ಮಕ್ಕಳನ್ನು ಕೂಡ ಹೊಡೆಯುತ್ತಿದ್ದ. ಈತನ ಕಾಟ ತಾಳಲಾರದೇ ಮೂವರು ಮಕ್ಕಳೊಂದಿಗೆ ರೇಣುಕಾ ತನ್ನ ತವರು ಮನೆಗೆ ಹೋಗಿದ್ದಳು.

ಆದ್ರೆ ಏಕಾಏಕಿಯಾಗಿ ಬಂದು ಇನ್ಮುಂದೆ ಕುಡಿಯುವುದಿಲ್ಲ ಎಂದು ಹೇಳಿ ಹೆಂಡ್ತಿ ಹಾಗೂ ಮಕ್ಕಳನ್ನ ಮನೆಗೆ ಕರೆದಿದ್ದಾನೆ. ಆದ್ರೆ ರೇಣುಕಾಳ ಅಣ್ಣ್ ಯಾರಾದ್ರು ದೊಡ್ಡವರನ್ನ ಕರೆದುಕೊಂಡು ಬಾ ಎಂದು ಹೇಳಿದ್ದಾನೆ. ಆಯ್ತು ಎಂದು ಹೋದವನು ಜೂನ್ 12 ರ ಸಂಜೆ ಮನೆಗೆ ಬಂದಿದ್ದಾನೆ. ತಿಂಡಿ ಕೊಡಿಸುವ ನೆಪದಲ್ಲಿ ತನ್ನ ಎರಡನೇ ಮಗಳು ಅಕ್ಷತಾ ಹಾಗೂ ಮೂರನೇ ಮಗು ರಮ್ಯಾಳನ್ನ ಕರೆದುಕೊಂಡು ಹೋಗಿದ್ದಾನೆ. ಅಂಗಡಿ ಬಳಿ ಹೋಗ್ತಾ ಇದ್ದಂತೆ ಅಕ್ಷತಾಳಿಗೆ ಹೊಡೆಯಲಿ ಆರಂಭಿಸಿದ್ದಾನೆ. ಭಯಗೊಂಡೆ ಆಕೆ ಮನೆಗೆ ಬಂದಿದ್ದಾಳೆ. ನಂತರ ಗ್ರಾಮದ ಹೊರವಯಲಯದಲ್ಲಿ ತನ್ನ್ ಜಮೀನಿನ ಬಳಿ ರಮ್ಯಾಳನ್ನ ಕರೆದುಕೊಂಡು ಹೋಗಿ ಸಾಯಿಸಿದ್ದಾನೆ.

ಕುಡಿದ ಅಮಲಿನಲ್ಲಿ ಮಗುವಿನ ಎದೆಗೆ ಗುದ್ದಿ ಸಾಯಿಸಿದ್ದಾನೆ. ಅಷ್ಟೇ ಅಲ್ಲ ಈ ಹಿಂದೆ ಜಗಳವಾದಾಗ ತನ್ನ ಹೆಂಡ್ತಿಗೆ ಕಿವಿಗೆ ಬಲವಾಗಿ ಹೊಡೆದಿದ್ದರಿಂದ ಆಕೆಗೆ ಈಗಲೂ ಕಿವಿ ಸರಿಯಾಗಿ ಕೇಳಿಸುವುದಿಲ್ಲ.

You may also like

Crime Karnataka State

ಕೊಲೆಯಲ್ಲಿ ಅಂತ್ಯವಾದ ವ್ಹೀಲಿಂಗ್ ಗಲಾಟೆ

ಹಾಸನ : ವ್ಹೀಲಿಂಗ್ ವಿಷಯಕ್ಕೆ ಸಂಬಂಧಿಸಿದಂತೆ ಶುರುವಾದ ಜಗಳ ಕೊಲೆಯಲ್ಲಿ ಅಂತ್ಯವಾಗಿರುವ ಘಟನೆ ಜಿಲ್ಲೆಯ ಗವೇನಹಳ್ಳಿಯಲ್ಲಿ ನಡೆದಿದೆ.ಘಟನೆಯಲ್ಲಿ ಆಟೋ ಚಾಲಕ ಸುಮಂತ್ (20) ಕೊಲೆಯಾದ ದುರ್ದೈವ ಯುವಕ.
Crime

ಬೈಕ್ ನಲ್ಲಿಯೇ ಸಹೋದರಿಯ ಶವ ಸಾಗಿಸಿದ ಅಣ್ಣ!

ನವದೆಹಲಿ : ಆಂಬುಲೆನ್ಸ್ ಬರುವುದಕ್ಕೆ ನಿರಾಕರಿಸಿರುವ ಹಿನ್ನೆಲೆಯಲ್ಲಿ ಯುವಕನೊಬ್ಬ ತನ್ನ ಸಹೋದರಿಯ ಮೃತ ದೇಹವನ್ನು ಬೈಕ್ ನಲ್ಲಿಯೇ ತೆಗೆದುಕೊಂಡು ಹೋಗಿರುವ ಅಮಾನವೀಯ ಘಟನೆ ಉತ್ತರ ಪ್ರದೇಶದ ಕೌಶಾಂಬಿಯಲ್ಲಿ