ಚಾಮರಾಜನಗರ: ಅಕ್ಕ-ಭಾವನ ಕಿರುಕುಳಕ್ಕೆ ಒಂದೇ ಕುಟುಂಬದ ಮೂವರು ಆತ್ಮಹತ್ಯೆ ಮಾಡಿಕೊಂಡ ಘಟನೆ ಚಾಮರಾಜನಗರದಲ್ಲಿ ನಡೆದಿದೆ. ಒಂದೇ ಕುಟುಂಬದ ಮೂವರು ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾರೆ.
ಮೃತ ಪಟ್ಟವರು ಮಹದೇವಸ್ವಾಮಿ(48), ಸವಿತಾ(40), ಸಿಂಚನಾ(13) ಎಂದು ಗುರುತಿಸಲಾಗಿದೆ. ಶುಕ್ರವಾರದಂದ ಪಕ್ಕದ ಮನೆಯವರು ಮಹದೇವಸ್ವಾಮಿ ಅವರ ಮನೆಗೆ ಹೋದಾಗ ಮೂವರು ಮನೆಯಲ್ಲಿಯೇ ನೇಣು ಬಿಗಿದುಕೊಂಡ ಸ್ಥಿತಿಯಲ್ಲಿ ಪತ್ತೆಯಾಗಿದ್ದಾರೆ. ಆತ್ಮಹತ್ಯೆಗೆ ನಿಖರವಾದ ಕಾರಣ ತಿಳಿದುಬಂದಿಲ್ಲ. ಆದರೆ ಅಕ್ಕ-ಭಾವ ಹಾಗೂ ಇವರ ಕುಟುಂಬದ ನಡುವೆ ಆಸ್ತಿ ವಿಚಾರಕ್ಕೆ ಗಲಾಟೆ ನಡೆಯುತ್ತಿತ್ತು ಎಂದು ಹೇಳಲಾಗಿದೆ.
ಡೆತ್ ನೋಟ್ ಪತ್ತೆ:
ಸಾಯೋದಕ್ಕು ಮುನ್ನ ಮೃತರು ಡೆತ್ ನೋಟ್ ಬರೆದಿಟ್ತಿದ್ದರು. ಈ ಡೆತ್ ನೋಟ್ ನಲ್ಲಿ ತಮ್ಮ ಅಕ್ಕ ಭಾವನೇ ಆತ್ಮಹತ್ಯೆಗೆ ಕಾರಣ ಎಂದು ಬರೆದಿದ್ದಾರೆ. ಅಕ್ಕ ಮಂಜುಳಾ ಹಾಗೂ ಭಾವ ಮಲ್ಲೆಶ್ ಗೆ ಆ ತಾಯಿ ದೇವಿರಮ್ಮ ಶಿಕ್ಷೆ ಕೊಡಬೇಕು ಎಂದು ಮಹದೇವಸ್ವಾಮಿ ಬರೆದಿದ್ದಾರೆ. ನಮ್ಮ ಆಸ್ತಿಯನ್ನು ಯಾವ ಕಾರಣಕ್ಕೂ ಇವರಿಗೆ ನೀಡಬೇಡಿ ಎಂದು ಬರೆದಿದ್ದಾರೆ.
ಸ್ಥಳಕ್ಕೆ ಬಂದ ಚಾಮರಾಜನಗರ ಗ್ರಾಮಾಂತರ ಪೊಲೀಸರು ಪ್ರಕರಣ ದಾಖಲಿಸಿಕೊಂಡು ತನಿಖೆ ನಡೆಸುತ್ತಿದ್ದಾರೆ.