ಕಿರಿಕ್ ಪಾರ್ಟಿ, ಕಾಂತಾರದಂತಹ ಅತ್ಯೂತ್ತಮ ಸಿನಿಮಾ ಕೊಟ್ಟ್ ನಿರ್ದೇಶಕ ರಿಷಬ್ ಶೆಟ್ಟಿ ಅವರಿಗೆ ಅಮೇರಿಕಾದಲ್ಲಿ ‘ವಿಶ್ವ ಶ್ರೇಷ್ಠ ಕನ್ನಡಿಗ 2023’ ಪ್ರಶಸ್ತಿ ದೊರಕಿದೆ. ಪ್ರತಿಷ್ಟಿತ ಪ್ಯಾರಾಮೌಂಟ್ ಥಿಯೇಟರ್ ನಲ್ಲಿ ಈ ಪ್ರಶಸ್ತಿ ಪ್ರಧಾನ ಸಮಾರಂಭ ನಡೆಯಿತು. ಈ ಪ್ರಶಸ್ತಿ ಸ್ವೀಕರಿಸಲು ಶೇಟ್ರು ಬಿಳಿ ಪಂಚೆಯಲ್ಲಿ ಹೋಗಿದ್ದು ತುಂಬಾನೇ ವಿಶೇಷವಾಗಿತ್ತು.
ಕಾಂತಾರ ಸಿನಿಮಾದಿಂದ ಅಂತಾರಾಷ್ಟ್ರೀಯ ಮಟ್ಟದಲ್ಲಿ ರಿಷಬ್ ಶೆಟ್ಟಿ ಗುರುತಿಸಿಕೊಂಡಿದ್ದಾರೆ. ಕಾಂತಾರ ಸಿನಿಮಾದ ಸಕ್ಸಸ್ ನ ನಂತರ ಅನೇಕ ಅವಾರ್ಡ್ ಗಳನ್ನು ಪಡೆದಿದ್ದಾರೆ. ಇತ್ತೀಚೆಗೆ ಪತ್ನಿ ಪ್ರಗತಿ ಜೊತೆ ರಿಷಬ್ ಶೆಟ್ಟಿ ‘ವಿಶ್ವ ಶ್ರೇಷ್ಠ ಕನ್ನಡಿಗ 2023’ ಪ್ರಶಸ್ತಿ ಪಡೆಯಲು ಅಮೇರಿಕಾದ ವಾಶಿಂಗ್ಟನ್ ನ ಸಿಯಾಟಲ್ ಗೆ ಹೋಗಿದ್ದರು.
ಅಲ್ಲಿನ ಸಹ್ಯಾದ್ರಿ ಕನ್ನಡ ಸಂಘ ಹಾಗೂ ವಾಷಿಂಗ್ಟನ್ ನ ಕನ್ನಡಿಗರಾದ ಮನು ಗೌರವ್ ಮತ್ತು ಅವರ ತಂಡದವರು ಸೇರಿ ಈ ಪ್ರಶಸ್ತಿ ನೀಡಿದ್ದಾರೆ.
ಈ ವೇಳೆ ಕಾರ್ಯಕ್ರಮಕ್ಕೆ ಬಂದಿದ್ದ ಕನ್ನಡಿಗರನ್ನು ಉದ್ದೇಶಿಸಿ ರಿಷಬ್ ಮಾತನಾಡಿದರು. ನೆಚ್ಚಿನ ನಟನನ್ನು ಹಾಗೂ ಕಾಂತಾರದಂತಹ ಸಿನಿಮಾ ಮಾಡಿದವರನ್ನು ನೋಡಲು ಅಲ್ಲಿ ಬಂದಿದ್ದ ಉತ್ಸುಕತೆಯಿಂದ ಮಾತನಾಡಿದರು.