Crime News: ಪ್ರೇಯಸಿಯ ಹುಟ್ಟು ಹಬ್ಬದ ದಿನವೇ ಕತ್ತು ಕೊಯ್ದ ಪಾಪಿ!
Bangalore : ಪಾಪಿಯೊಬ್ಬ ಪ್ರೇಯಸಿಯ ಹುಟ್ಟು ಹಬ್ಬದ ದಿನವೇ ಕತ್ತು ಕೊಯ್ದು ಹತ್ಯೆ ಮಾಡಿರುವ ಘಟನೆ ನಗರದ ಲಗ್ಗೆರಿಯಲ್ಲಿ ನಡೆದಿದೆ. ನವ್ಯ (24) ಕೊಲೆಯಾದ ಯುವತಿ. ಕೊಲೆಯಾದ ಯುವತಿ, ಪೊಲೀಸ್ ಇಲಾಖೆಯ ಆಂತರಿಕ ಭದ್ರತಾ ವಿಭಾಗದಲ್ಲಿ ಕ್ಲರ್ಕ್ ಆಗಿ ಕಾರ್ಯ ನಿರ್ವಹಿಸುತ್ತಿದ್ದಳು. ಪ್ರಶಾಂತ್ ಕೊಲೆ ಮಾಡಿದ ಯುವಕ ಎಂದು ಗುರುತಿಸಲಾಗಿದೆ. ನವ್ಯ ಹಾಗೂ ಪ್ರಶಾಂತ್ ಕಳೆದ 6 ವರ್ಷಗಳಿಂದ ಪರಸ್ಪರ ಪ್ರೀತಿಸುತ್ತಿದ್ದರು. ಇವರಿಬ್ಬರೂ ಕನಕಪುರ ಮೂಲದವರು. ಅಲ್ಲದೇ, ದೂರದ ಸಂಬಂಧಿಕರು. ಕಳೆದ ಮಂಗಳವಾರ ನವ್ಯ ಬರ್ತಡೇ ಇತ್ತು. […]