Kornersite

Bengaluru Just In Karnataka Politics State

DK Shivakumar: ಡಿಕೆಶಿಗೆ ಓಲಾ-ಊಬರ್ ಚಾಲಕರ ಸಂಘದ ಬೆಂಬಲ

Bangalore: ಡಿ.ಕೆ ಶಿವಕುಮಾರ್ (DK Shivakumar) ಅವರನ್ನೇ ಸಿಎಂ ಮಾಡಬೇಕು ಎಂದು ಓಲಾ-ಊಬರ್ (Ola Uber) ಚಾಲಕರ ಸಂಘಟನೆ ಆಗ್ರಹಿಸಿದೆ. ಸದ್ಯ ಸಿಎಂ ಸ್ಥಾನಕ್ಕೆ ಸಿದ್ದರಾಮಯ್ಯ ಹಾಗೂ ಡಿಕೆಶಿ ಮಧ್ಯೆ ಬಿಗ್ ಫೈಟ್ ನಡೆಯುತ್ತಿದೆ. ಸದ್ಯ ಡಿಕೆಶಿಗೆ ಬೆಂಬಲ ಸೂಚಿಸಿದ ಓಲಾ-ಊಬರ್ ಸಂಘಟನೆ ಡಿಕೆಶಿ ಸಿಎಂ, ಅವರ ಜೊತೆ ನಾವಿದ್ದೇವೆ ಎಂದು ಚಾಲಕರು ಬ್ಯಾನರ್ ಹಿಡಿದು ನಿಂತಿದ್ದಾರೆ. ಈ ಸಂದರ್ಭದಲ್ಲಿ ಮಾತನಾಡಿದ ಅವರು, ಓಲಾ, ಊಬರ್ ಅಸೋಸಿಯೇಷನ್ ಅಧ್ಯಕ್ಷ ತನ್ವೀರ್ ಪಾಷಾ, ಡಿ.ಕೆ ಶಿವಕುಮಾರ್ ಬಲಿಷ್ಟ ನಾಯಕರು. […]

Bengaluru Just In Karnataka Politics State

Congress: ಕಗ್ಗಂಟಾಗಿಯೇ ಉಳಿಯುತ್ತಿರುವ ಸಿಎಂ ಆಯ್ಕೆ ವಿಚಾರ; ಡಿಕೆಶಿ, ಸಿದ್ದರಾಮಯ್ಯ ಹೇಳಿದ್ದೇನು?

ಬೆಂಗಳೂರು: ವಿಧಾನಸಭೆ ಚುನಾವಣೆಯಲ್ಲಿ ಕಾಂಗ್ರೆಸ್ ಭರ್ಜರಿ ಜಯ ಗಳಿಸಿದ್ದು, ಈಗ ಸಿಎಂ ಸ್ಥಾನಕ್ಕಾಗಿ ಡಿಕೆಶಿ ಹಾಗೂ ಸಿದ್ದರಾಮಯ್ಯ ಮಧ್ಯೆ ಬಿಗ್ ಫೈಟ್ ನಡೆಯುತ್ತಿದೆ. ಈ ಹಿನ್ನೆಲೆಯಲ್ಲಿ ಬಾಗಲೂರು ಬಳಿಯ ಫಾರ್ಮ್ ಹೌಸ್ ನಲ್ಲಿ ಡಿ.ಕೆ. ಶಿವಕುಮಾರ್ ಹಾಗೂ ಬೆಂಬಲಿಗರು ಸಭೆಯಲ್ಲಿ ಮಾತನಾಡಿದ ಅವರು, ಯಾವ ಶಾಸಕರು ಏನು ಮಾಡಿದ್ದರೋ ನನಗೆ ಗೊತ್ತಿಲ್ಲ. ನನ್ನ ಬಳಿ 135 ಶಾಸಕರು ಇದ್ದಾರೆ. 135 ಶಾಸಕರನ್ನು ಸೋನಿಯಾ ಗಾಂಧಿಗೆ ಅರ್ಪಿಸಿದ್ದೇವೆ ಎಂದು ಹೇಳಿದ್ದಾರೆ. ಇದರ ಮಧ್ಯೆಯೇ ಬೆಂಗಳೂರು ನಗರದಲ್ಲಿ ಸಿದ್ದರಾಮಯ್ಯ ಬೆಂಬಲಿಗರು […]

Bengaluru Just In Karnataka Politics State

Congress: ದೆಹಲಿಯಲ್ಲಿ ಸಿಎಂ ಪಟ್ಟದ ಪಟ್ಟು; ಪ್ರಯಾಣ ಬೆಳೆಸಿದ ಸಿದ್ದು!

ಬೆಂಗಳೂರು ; ಸಿಎಂ ಸ್ಥಾನಕ್ಕೆ ಪ್ರಯತ್ನ ನಡೆಸುತ್ತಿರುವ ಕೆಪಿಸಿಸಿ ಅಧ್ಯಕ್ಷ ಡಿ.ಕೆ. ಶಿವಕುಮಾರ್ ಹಾಗೂ ಮಾಜಿ ಸಿಎಂ ಸಿದ್ದರಾಮಯ್ಯ ತಮ್ಮ ಆಯ್ಕೆಯ ಲಾಬಿಯನ್ನು ದೆಹಲಿ ಮಟ್ಟದಲ್ಲಿ ನಡೆಸಲು ತೀರ್ಮಾನಿಸಿದ್ದಾರೆ. ಮೇ 13ರ ಫಲಿತಾಂಶದಲ್ಲಿ ಕಾಂಗ್ರೆಸ್ ಭರ್ಜರಿ ಜಯಸಾಧಿಸಿದೆ. 135 ಸ್ಥಾನಗಳನ್ನು ಗಳಿಸಿ ಪೂರ್ಣ ಪ್ರಮಾಣದ ಸರ್ಕಾರ ರಚಿಸುವ ಅವಕಾಶ ಸಿಕ್ಕಿದೆ. ಹೀಗಾಗಿ 5 ವರ್ಷ ಸರಾಗ ಹಾಗೂ ಸುಲಲಿತವಾಗಿ ಸರ್ಕಾರ ನಡೆಸಿಕೊಂಡು ಸಾಗುವ ಅವಕಾಶ ಇರುವ ಹಿನ್ನೆಲೆಯಲ್ಲಿ ಪಕ್ಷದ ರಾಜ್ಯಾಧ್ಯಕ್ಷರಾಗಿ ಸಂಘಟನೆ ಮಾಡಿರುವ ಡಿಕೆಶಿ ಹಾಗೂ ಹೆಚ್ಚಿನ […]

Bengaluru Karnataka Politics State Uncategorized

Congress: ಯಾರಾಗಲಿದ್ದಾರೆ ರಾಜ್ಯದ ಸಿಎಂ? ವೀಕ್ಷಕರ ಮುಂದೆ ಶಾಸಕರು ಹೇಳಿದ್ದೇನು?

Bangalore : ಭರ್ಜರಿ ಬಹುಮತ ಪಡೆದಿರುವ ಕಾಂಗ್ರೆಸ್‍ನಲ್ಲಿ (Congress) ಸಿಎಂ ಆಯ್ಕೆ ಕಗ್ಗಂಟು ಹಾಗೆ ಉಳಿದಿದೆ. ಸದ್ಯ ಈ ಚೆಂಡು ಹೈಕಮಾಂಡ್ ಅಂಗಳದಲ್ಲಿದೆ. ಖಾಸಗಿ ಹೋಟೆಲ್ ನಲ್ಲಿ ಕಾಂಗ್ರೆಸ್‌ ಪಕ್ಷದ ಶಾಸಕಾಂಗ ಸಭೆ ನಡೆದಿದ್ದು, ಈ ಸಂದರ್ಭದಲ್ಲಿ ವೀಕ್ಷಕರು ಶಾಸಕರ ಬಳಿ ಅಭಿಪ್ರಾಯ ಪಡೆದಿದ್ದಾರೆ. ಸರಿಸುಮಾರು 1:30ರವರೆಗೂ ವೀಕ್ಷಕರಿಗೆ ಶಾಸಕರು ಅಭಿಪ್ರಾಯ ನೀಡಿದ್ದಾರೆ. ಸಿದ್ದರಾಮಯ್ಯ (Siddaramaiah), ಡಿಕೆ ಶಿವಕುಮಾರ್‌ (DK Shivakumar) ಇಬ್ಬರೂ ಒಪ್ಪುವಂತಹ ತೀರ್ಮಾನವನ್ನೇ ಹೈಕಮಾಂಡ್ ಅಂಗಳಕ್ಕೆ ಕಳುಹಿಸಿಕೊಡಲಾಗಿದೆ. ಹೈಕಮಾಂಡ್ ಈಗ ಯಾವ ನಿರ್ಣಯ ಕೈಗೊಳ್ಳಲಿದೆ […]

Bengaluru Just In Karnataka Politics State

CM Candidate: ಸಿಎಂ, ಮೂವರು ಡಿಸಿಎಂ!? ಏನಿದು ಕಾಂಗ್ರೆಸ್ ಸೂತ್ರ?

ಬೆಂಗಳೂರು : ರಾಜ್ಯ ವಿಧಾನಸಭಾ ಚುನಾವಣೆಯಲ್ಲಿ ಕಾಂಗ್ರೆಸ್ ಪರಕ್ಷವು ಭರ್ಜರಿ ಜಯ ಸಾಧಿಸಿದೆ. ಕರ್ನಾಟಕದ ಜನರು ಸಂಪೂರ್ಣವಾಗಿ ಕಾಂಗ್ರೆಸ್ ಗೆ ಆಶೀರ್ವಾದ ಮಾಡಿದ್ದಾರೆ. ಸಿದ್ದರಾಮಯ್ಯ ಮತ್ತು ಡಿಕೆ.ಶಿವಕುಮಾರ್ ಜೋಡೆತ್ತುಗಳ ಎದುರು, ಬಿಜೆಪಿ, ಜೆಡಿಎಸ್ ಮಕಾಡೆ ಮಲಗಿವೆ. ಹೀಗಾಗಿ ಸದ್ಯ ಕಾಂಗ್ರೆಸ್ ನಲ್ಲಿ ಸಿಎಂ ಗಾದೆಯ ಗುದ್ದಾಟ ನಡೆಯುತ್ತಿದೆ. ಸಿದ್ದು ಹಾಗೂ ಡಿಕೆಶಿ ಮಧ್ಯೆ ಸಿಎಂ ಕುರ್ಚಿಗಾಗಿ ಕಿತ್ತಾಟ ಇದ್ದರೂ, ಚುನಾವಣೆ ಸಂದರ್ಭದಲ್ಲಿ ಇಬ್ಬರು ಒಂದಾಗಿಯೇ ಜೋಡೆತ್ತಿನ ರೀತಿಯಲ್ಲಿಯೇ ಇದ್ದರು. ಹೀಗಾಗಿಯೇ ಇದು ಮತದಾರರ ಮೇಲೆ ಯಾವುದೇ ಪರಿಣಾಮ […]

Bengaluru Just In Karnataka Politics State

Congress: ಯಾರಾಗಲಿದ್ದಾರೆ ರಾಜ್ಯದ ಸಿಎಂ? ಯಾವ ಸೂತ್ರದ ಮೇಲೆ ಆಯ್ಕೆ?

Bangalore : ರಾಜ್ಯ ವಿಧಾನಸಭಾ ಚುನಾವಣೆಯಲ್ಲಿ ಕಾಂಗ್ರೆಸ್ ಅಭೂತಪೂರ್ವ ಯಶಸ್ಸು ಕಂಡಿದ್ದು, ಸದ್ಯ ಅಲ್ಲಿ ಸರ್ಕಾರ ರಚನೆಯ ಚಿಂತನೆ ನಡೆದಿದೆ. ಹೀಗಾಗಿ ಯಾರು ಸಿಎಂ ಆಗುತ್ತಾರೆ ಎಂಬ ಚರ್ಚೆಗಳು ಶುರುವಾಗಿವೆ. ಅಲ್ಲದೇ, ಸಿಎಂ ಆಗುವುದಕ್ಕಾಗಿಯೇ ಕಾಂಗ್ರೆಸ್ ಪಾಳಯದಲ್ಲಿ ಹಲವರು ಪೈಪೋಟಿ ನಡೆಸುತ್ತಿದ್ದಾರೆ. ಈಗಾಗಲೇ ಸಿಎಂ ರೇಸ್ ನಲ್ಲಿ ಇಬ್ಬರಂತೂ ಇರುವುದು ಎಲ್ಲರಿಗೂ ತಿಳಿದ ವಿಷಯವೇ. ಹಲವು ದಿನಗಳಿಂದಲೂ ಮಾಜಿ ಸಿಎಂ ಸಿದ್ದರಾಮಯ್ಯ ಹಾಗೂ ಕೆಪಿಸಿಸಿ ಅಧ್ಯಕ್ಷ ಡಿ.ಕೆ. ಶಿವಕುಮಾರ್ ಸಿಎಂ ಕುರ್ಚಿಯ ಮೇಲೆ ಕಣ್ಣು ಇಟ್ಟಿದ್ದರು. ಇಬ್ಬರ […]

Bengaluru Just In Karnataka Politics State

ಗೂಗಲ್ ಸರ್ಚನಲ್ಲಿ ಟಾಪ್ ನಲ್ಲಿದೆ ಡಿಕೆಶಿ, ಸಿದ್ದರಾಮಯ್ಯ ಹೆಸರು

ಕರ್ನಾಟಕ ಚುನಾವಣೆಯಲ್ಲಿ ಕಾಂಗ್ರೆಸ್ ಗೆಲ್ಲುತ್ತಿದ್ದಂತೆ, ಸಿಎಂ ಅಭ್ಯರ್ಥಿಗಳಾದ ಸಿದ್ದರಾಮಯ್ಯ ಹಾಗೂ ಡಿ ಕೆ ಶಿವಕುಮಾರ್ ಹೆಸರುಗಳು ಗೂಗಲ್ ಸರ್ಚ್ ನಲ್ಲಿ ಟ್ರೆಂಡ್ ಆಗ್ತಾ ಇದೆ. ಜನರು ಸಿಕ್ಕಾಪಟ್ಟೆ ಇವರಿಬ್ಬರ ಬಗ್ಗೆ ಗೂಗಲ್ ನಲ್ಲಿ ಸರ್ಚ್ ಮಾಡುತ್ತಿದ್ದಾರೆ. ಕರ್ನಾಟಕ ವಿಧಾನಸಭೆ ಚುನಾವಣೆ ಮತದಾನ ಆಗ್ತಾ ಇದ್ದಂತೆ ಚುನಾವಣೆಯ ಬಗ್ಗೆ, ಪಾರ್ಟಿ ಬಗ್ಗೆ, ಅಭ್ಯರ್ಥಿಗಳ ಬಗ್ಗೆ ಗೂಗಲ್ ಸರ್ಚ್ ಹೆಚ್ಚಾಗಿದೆ. ಯಾರಿಗೆ ಬಹುಮತ ಸಿಗಲಿದೆ, ಎಕ್ಸಿಟ್ ಪೋಲ್ ಏನ್ ಹೇಳುತ್ತೆ ಎನ್ನುವುದರ ಬಗ್ಗೆ ಕುತೂಹಲದಿಂದ ಜನರು ಸರ್ಚ್ ಮಾಡುತ್ತಿದ್ದಾರೆ. ಕೇವಲ್ […]

Bengaluru Just In Karnataka Politics State

karnataka Assembly Election: ಕಾಂಗ್ರೆಸ್ ಗೆಲುವಿಗಾಗಿ ಚಾಮುಂಡೇಶ್ವರಿ ಮೊರೆ ಹೋದ ಸಿದ್ದು, ಡಿಕೆಶಿ!

ಮಾಜಿ ಸಿಎಂ ಸಿದ್ದರಾಮಯ್ಯ ಹಾಗೂ ಕೆಪಿಸಿಸಿ ಅಧ್ಯಕ್ಷ ಡಿಕೆಶಿ ಒಗ್ಗಟ್ಟಾಗಿ ಕಾಂಗ್ರೆಸ್ ಗೆಲ್ಲಿಸುವ ತಂತ್ರ ಹೆಣೆದ್ದಿದ್ದಾರೆ. ತಮ್ಮ ಸಿಎಂ ಮೇಲಿನ ಕನಸು ಚುನಾವಣೆ ಸಂದರ್ಭದಲ್ಲಿ ಮತದಾರರ ಮೇಲೆ ಯಾವುದೇ ಪರಿಣಾಮ ಬೀರಬಾರದು ಎಂಬ ಕಾರಣಕ್ಕೆ ಒಗ್ಗಟ್ಟಿನ ಮಂತ್ರ ಪಠಿಸಿದ್ದರು. ಸದ್ಯ ಚಾಮುಂಡೇಶ್ವರಿ ದರ್ಶನಕ್ಕೂ ಕೈ ಕೈ ಹಿಡಿದು ತೆರಳಿ, ಒಗ್ಗಟ್ಟಿನ ಮಂತ್ರ ಜಪಿಸಿದ್ದಾರೆ. ಚಾಮುಂಡಿಬೆಟ್ಟಕ್ಕೆ ಆಗಮಿಸಿ ನಾಡದೇವತೆ ಚಾಮುಂಡೇಶ್ವರಿಗೆ ವಿಶೇಷ ಪೂಜೆ ಸಲ್ಲಿಸಿದ್ದಾರೆ. ಒಟ್ಟಿಗೆ ಈಡುಗಾಯಿ ಒಡೆಯುವ ಮೂಲಕ ದೇವರಿಗೆ ಹರಕೆ ಸಲ್ಲಿಸಿದರು. ಬೆಂಗಳೂರಿನಿಂದ ಮೈಸೂರಿಗೆ ಆಗಮಿಸಿದ […]

Bengaluru Just In Karnataka Politics State

Bhajarangi: ಡಿ.ಕೆ. ಶಿವಕುಮಾರ್ ಗೆ ಪ್ರಸಾದ ಕರುಣಿಸಿದ ಭಜರಂಗಿ!

ರಾಜ್ಯದಲ್ಲಿ ಭಜರಂಗಿ ವಿಷಯವಾಗಿ ಬಿಜೆಪಿ ಹಾಗೂ ಕಾಂಗ್ರೆಸ್ ಮಧ್ಯೆ ದೊಡ್ಡ ಫೈಟ್ ನಡೆಯಿತು. ಕಾಂಗ್ರೆಸ್ ಪ್ರಣಾಳಿಕೆಯನ್ನೇ ಮುಂದಿಟ್ಟುಕೊಂಡು ಬಿಜೆಪಿ ನಾಯಕರು ಲಾಭ ಮಾಡಿಕೊಳ್ಳುವ ಪ್ರಯತ್ನ ಮಾಡಿದರು. ಇದೇ ವಿಷಯ ಮುಂದಿಟ್ಟುಕೊಂಡು ಕಾಂಗ್ರೆಸ್ ಗೆ ಚುನಾವಣೆಯಲ್ಲಿ ಮುಖಭಂಗ ಉಂಟು ಮಾಡಲು ಯತ್ನಿಸಿದರು. ಆದರೆ, ಇಂದು ಡಿ.ಕೆ. ಶಿವಕುಮಾರ್ ಗೆ ಭಜರಂಗಿಯೇ ಪ್ರಸಾದ ಕರುಣಿಸಿದ್ದಾನೆ ಎನ್ನಲಾಗಿದೆ. ಡಿ.ಕೆ. ಶಿವಕುಮಾರ್ ಅವರು ಇಂದು ಬೆಳಿಗ್ಗೆ ಮೈಸೂರು ಸರ್ಕಲ್ ನಲ್ಲಿರುವ ಆಂಜನೇಯ ದೇವಸ್ಥಾನಕ್ಕೆ ಭೇಟಿ ನೀಡಿದ್ದರು. ಈ ಸಂದರ್ಭದಲ್ಲಿ ಭಜರಂಗಿಯ ದರ್ಶನ ಮಾಡಿ […]

Just In Kornotorial

ಬಂಡೆಯ ಮೇಲೆ ಟಗರು ನಿಲ್ಲುವುದೋ? ಟಗರಿನ ಮೇಲೆ ಬಂಡೆ ಬೀಳುವುದೋ? ಸದ್ಯಕ್ಕಂತೂ ಮತದಾರರ ಮುಂದೆ ಒಂದೇ ಎನ್ನುತ್ತಿದ್ದಾರೆ!

ಸದ್ಯ ರಾಜ್ಯ ವಿಧಾನಸಭಾ ಚುನಾವಣೆಗೆ ಕ್ಷಣಗಣನೆ ಆರಂಭವಾಗಿದೆ. ಹೀಗಾಗಿ ಎಲ್ಲ ಪಕ್ಷಗಳು ಶಕ್ತಿ ಮೀರಿ ಜನರ ಮನಸ್ಸು ಸೆಳೆಯಲು ಪ್ರಯತ್ನಿಸುತ್ತಿವೆ. ಅತಿರತ ಮಹಾರಾತ ಎನಿಸಿಕೊಂಡಿದ್ದ ನಾಯಕರುಗಳು ರಾಜ್ಯದಲ್ಲಿಯೇ ಬೀಡು ಬಿಟ್ಟಿರುವುದು ಕೂಡ ಈ ಬಾರಿ ಎಲ್ಲ ಪಕ್ಷಗಳ ಆತ್ಮವಿಶ್ವಾಸ ಕುಗ್ಗಿಸಿದೆ ಎಂಬುವುದಕ್ಕೆ ಸಾಕ್ಷಿಯಾಗಿದೆ. ರಾಜ್ಯದಲ್ಲಿ ಮೂರು ಪಕ್ಷಗಳ ಮಧ್ಯೆ ಬಿಗ್ ಫೈಟ್ ಇದೆಯಾದರೂ ಬಹುಮತ ಪಡೆದು ಅಧಿಕಾರ ಗಳಿಸಲು ಮಾತ್ರ ಕಾಂಗ್ರೆಸ್ ಹಾಗೂ ಬಿಜೆಪಿ ಪೈಪೋಟಿ ನಡೆಸುತ್ತಿವೆ. ಜೆಡಿಎಸ್ ಸಮ್ಮಿಶ್ರಕ್ಕಾಗಿ ಮಾತ್ರ ಹೋರಾಟ. ಒಂದು ವೇಳೆ ಬಿಜೆಪಿ […]